ಧಾರವಾಡ: ಕೌಟಿಲ್ಯ ಗಣಿತ ಅಕಾಡೆಮಿಯ ವಿದ್ಯಾರ್ಥಿ ಅಭಿಷೇಕ್ ಗೊಂಗಡಿಕೊಪ್ಪ ಅವರು ಅಗ್ನಿವೀರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿ ದೇಶಸೇವೆಗೆ ಆಯ್ಕೆಯಾಗಿದ್ದಾರೆ. ಅವರು ಮುಂದಿನ ತರಬೇತಿಗಾಗಿ ಒಡಿಶಾ ರಾಜ್ಯಕ್ಕೆ ತೆರಳಲಿದ್ದಾರೆ.
ಈ ಸಂದರ್ಭದಲ್ಲಿ ಕೌಟಿಲ್ಯ ಗಣಿತ ಅಕಾಡೆಮಿಯ ಸಂಸ್ಥಾಪಕರು ಹಾಗೂ ನಿರ್ದೇಶಕರಾದ ನವೀನ್ ಆರ್. ಬಿ. ಮಾತಾನಾಡಿದ ಅವರು, ಅಭಿಷೇಕ್ ಅವರಿಗೆ ಅಭಿನಂದನೆ ಸಲ್ಲಿಸಿ, ದೇಶಸೇವೆಯಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಹಾಗೂ ಸಂಸ್ಥೆಗೆ ಕೀರ್ತಿತರಲಿ ಎಂದು ಶುಭಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೆಕ್ಯಾನಿಕಲ್ ಎಂಜಿನಿಯರ್ ಕಿಶೋರ್ ಅವರು ಮಾತಾಡಿ, ಯುವಕರು ಶಿಸ್ತು, ಪರಿಶ್ರಮ ಮತ್ತು ದೃಢ ಸಂಕಲ್ಪದಿಂದ ಗುರಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಇದೇ ವೇಳೆಯಲ್ಲಿ ಕೌಟಿಲ್ಯ ಗಣಿತ ಅಕಾಡೆಮಿಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ ಅಭಿಷೇಕ್ ಗೊಂಗಡಿಕೊಪ್ಪ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ದೇಶಸೇವೆಯ ಪಯಣ ಯಶಸ್ವಿಯಾಗಲಿ ಎಂದು ಶುಭಕೋರಿದರು.