LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಸೀಮಿತ ಆವೃತ್ತಿಯ ಕೋಕಾ-ಕೋಲಾ ಕಲರ್-ಚೇಂಜಿಂಗ್ ಕಪ್ಗಳನ್ನು ಉಚಿತವಾಗಿ ಪಡೆಯುವ ಅವಕಾಶ

ಮೆಕ್‌ಡೊನಾಲ್ಡ್ಸ್ ಇಂಡಿಯಾ ಸಲದ ನವರಾತ್ರಿಯನ್ನು ರಂಗು-ರಂಗಾಗಿಸಲಿದೆ

 

ಬೆಂಗಳೂರು: ಮೆಕ್‌ಡೊನಾಲ್ಡ್ಸ್ ಇಂಡಿಯಾ (ಪಶ್ಚಿಮ ಮತ್ತು ದಕ್ಷಿಣ) ತನ್ನ ಅಭಿಮಾನಿಗಳಿಗೆ ಈ ಸಲ ನವರಾತ್ರಿಗೆ ರಂಗು-ರಂಗಿನ ಸಡಗರವನ್ನು ನೀಡಲಿದೆ. ಕೋಕಾ-ಕೋಲಾ ಜೊತೆ ಕೈಗೂಡಿಸಿರುವ ಮೆಕ್‌ಡೊನಾಲ್ಡ್ಸ್ ಇಂಡಿಯಾ, ಕೋಕಾ-ಕೋಲಾ ಕಲರ್-ಚೇಂಜಿಂಗ್ ಕಪ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಮೊದಲ ಬಾರಿಗೆ ಪರಿಚಯಿಸುತ್ತಿದೆ. ಆದರೆ ಇದು, ಸೀಮಿತ ಅವಧಿಗೆ ಮಾತ್ರ - ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 2, 2025 ರವರೆಗೆ. ಮುಂಬೈ ಮತ್ತು ಬೆಂಗಳೂರಿನ ಮೆಕ್‌ಡೊನಾಲ್ಡ್ಸ್ ರೆಸ್ಟೋರೆಂಟ್‌ಗಳಲ್ಲಿ ಈ ವಿಶೇಷವಾದ, ಸೀಮಿತ ಆವೃತ್ತಿಯ ಕಪ್‌ಗಳು ದೊರೆಯುತ್ತವೆ.

 

ಆಯ್ದ ಮೆಕ್‌ಡೊನಾಲ್ಡ್ಸ್ ಲಾರ್ಜ್ ಮೀಲ್ಸ್ ಖರೀದಿಸುವ ಗ್ರಾಹಕರಿಗೆ ಕಲರ್ ಚೇಂಜಿಂಗ್ ಕಪ್ ಉಚಿತವಾಗಿ ದೊರೆಯುತ್ತದೆ. ಮೆಕ್‌ಡೆಲಿವರಿ, ಸ್ವಿಗ್ಗಿ ಅಥವಾ ಜೊಮಾಟೊ ಮೂಲಕ ಆಯ್ದ  ಮೀಡಿಯಮ್ ಬರ್ಗರ್‌ ಮೀಲ್ ಗಳನ್ನು ಖರೀದಿಸುವವರಿಗೂ ಈ ಕಪ್ ಗಳು ಉಚಿತವಾಗಿ ದೊರೆಯುತ್ತವೆ.



ಈ ಸೀಮಿತ ಆವೃತ್ತಿಯಲ್ಲಿ ಆರು ಆಕರ್ಷಕ ಬಣ್ಣಗಳ - ಹಳದಿ, ಕೆಂಪು, ನೀಲಿ, ಹಸಿರು, ಗುಲಾಬಿ ಮತ್ತು ಬೂದು - ಲೋಹದ ಕಪ್‌ಗಳಿರುತ್ತವೆ. ಇವುಗಳಲ್ಲಿ ತಂಪಾದ ಕೋಕಾ-ಕೋಲಾ ಅಥವಾ ಇತರ ಪಾನೀಯಗಳನ್ನು ತುಂಬಿಸಿದರೆ ಆಗ ಈ ಕಪ್ ಗಳ ಬಣ್ಣ ಬದಲಾಗುತ್ತದೆ.

 

ಈ ಆಕರ್ಷಕವಾದ ಕಪ್‌ಗಳನ್ನು ಉಚಿತವಾಗಿ ಪಡೆಯಲು: ರೆಸ್ಟೋರೆಂಟ್ ನಲ್ಲಿ ಸೆಲೆಕ್ಟ್ ಲಾರ್ಜ್ ಮೀಲ್ಸ್‌ ಖರೀದಿಸಿ; ಅಥವಾ ಮೆಕ್‌ಚೀಸ್ ವೆಜ್/ಚಿಕನ್, ಮೆಕ್‌ಸ್ಪೈಸಿ ಪ್ರೀಮಿಯಂ ವೆಜ್/ಚಿಕನ್, ಅಥವಾ ಮಹಾರಾಜ ಮ್ಯಾಕ್ ವೆಜ್/ಚಿಕನ್ ನಂತಹ ಆಯ್ದ ಮೀಡಿಯಂ ಮೀಲ್ಸನ್ನು ಡೆಲಿವರಿ ಮೂಲಕ ಖರೀದಿಸಿ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ