ಕುಷ್ಟಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒಲಿಂಪಿಯಾಡ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಲ್ಲಿ ಪ್ರತಿಭೆಯನ್ನು ಗುರುತಿಸಿ ಸ್ಪರ್ಧಾತ್ಮಕ ಪರೀಕ್ಷೆಗಳ ವ್ಯವಸ್ಥೆಯನ್ನು CSC ಕೇಂದ್ರಗಳ ಮೂಲಕ ನಡೆಸಲಾಗುತ್ತಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಕುಷ್ಟಗಿ ವಲಯ ಮೇಲ್ವಿಚಾರಕರ ಅರುಣ ಅವರು ಮಾತನಾಡಿದರು
ಕುಷ್ಟಗಿ ತಾಲೂಕಿನ ಗಾಂಧಿನಗರ ಕಾರ್ಯಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ CSC ಸೇವಾ ಕೇಂದ್ರದಲ್ಲಿ 2025-26 ನೇ ಸಾಲಿನ ಓಲಂಪಿಯಾಡ್ ಸ್ಪರ್ಧಾತ್ಮಕ ಪರೀಕ್ಷೇಯಲ್ಲಿ ಕುಷ್ಟಗಿ ತಾಲೂಕಿನಿಂದ 570 ವಿಧ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಗೋವಿಂದ ಹಾಗೂ ಪವನ ಕುಮಾರ್ ಓಲಂಪಿಯಾಡ್ ಸ್ಪರ್ಧೆಯಲ್ಲಿ ಪ್ರಥಮ ಮತ್ತು ತೃತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ ವಲಯದ ಮೇಲ್ವಿಚಾರಕರು ಅರುಣ ಕುಮಾರ್ ರವರು ಪ್ರಮಾಣ ಪತ್ರವನ್ನು ವಿತರಣೆ ಮಾಡಿದರು.
ಪ್ರಸ್ತುತ ವಿದ್ಯಮಾನದಲ್ಲಿ ವಿಧ್ಯಾರ್ಥಿಗಳು ಶಾಲಾ ಪಠ್ಯಕ್ರಮದ ಜೊತೆಗೆ ತಾರ್ಕಿಕ ಚಿಂತನೆ, ಸಮಸ್ಯೆಗಳಿಗೆ ಪರಿಹಾರ ಕೌಶಲ್ಯ ಮತ್ತು ವಿಷಯಗಳ ಬಗ್ಗೆ ಒಲಿಂಪಿಯಾಡ್ ಪರೀಕ್ಷೆಗಳ ಪ್ರಮುಖವಾಗಿದೆ. ಗಣಿತ (Mathematics) , ವಿಜ್ಞಾನ (Science), ಇಂಗ್ಲಿಷ್ (English), ಸಾಮಾನ್ಯ ಜ್ಞಾನ (General Knowledge), ಕಂಪ್ಯೂಟರ್ / ಇನ್ಫರ್ಮ್ಯಾಟಿಕ್ಸ್ ,ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ (ಉನ್ನತ ಮಟ್ಟದ ಒಲಿಂಪಿಯಾಡ್ಗಳಲ್ಲಿ) ಪ್ರಯೋಜನಗಳ ವಿಷಯದ ಮೇಲೆ ಗಾಢವಾದ ಜ್ಞಾನ ಬೆಳೆಯುತ್ತದೆ. ತಾರ್ಕಿಕ ಮತ್ತು ವಿಶ್ಲೇಷಣಾತ್ಮಕ ಚಿಂತನೆ ಹೆಚ್ಚುತ್ತದೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ ಎಂದು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ರಾಘವೇಂದ್ರ CSC ನೋಡಲ್ ಅಧಿಕಾರಿಗಳು ಮಾತನಾಡಿದರು

ಈ ಕಾರ್ಯಕ್ಷೇತ್ರದಲ್ಲಿ ಮಹೇಶ್ ಕೃಷಿ ಮೇಲ್ವಿಚಾರಕರು, ಪಲ್ಲವಿ,ಅಧ್ಯಕ್ಷರು ಗಾಂಧಿನಗರ ಒಕ್ಕೂಟ ವಾಸವಿ,ಸುಧಾರಾಣಿ, ರೋಹಿಣಿ, ಒಕ್ಕೂಟದ ಪದಾಧಿಕಾರಿಗಳು, ಶರಣಮ್ಮ,ಜಯಶ್ರೀ, ತಲೆಖಾನ್ ಜಯಶ್ರೀ, ಶಾಂತಮ್ಮ, ಶಿಲ್ಪಾ ಕುಷ್ಟಗಿ ರೂರಲ್ ವಲಯದ ಸೇವಾ ಪ್ರತಿನಿಧಿಗಳು ಸ್ವ ಸಹಾಯ ಸಂಘದ ಸದಸ್ಯರು ವಿಧ್ಯಾರ್ಥಿಗಳು ಭಾಗವಹಿಸಿದ್ದರು