LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಭಾವೖಕ್ಯತೆಯ ಕೊಪ್ಪಳದ ಮಹಾಪರಿಷೆ.

ಕಲ್ಯಾಣದ ಉತ್ತರ ಕರ್ನಾಟಕದಲಿ

ಕೊಪ್ಪಳ ಆರಾಧ್ಯದೇವರ ಸಾಮರಸ್ಯತೆಯ

ಮಹಿಮೆಯನು ಸಾರುತಲಿಹುದು

ಸಾಗರದೋಪಾದಿಯ ಮಹಾಪರಿಷೆಯು./1/

 

ಶ್ರೀ ಅಭಿನವ ಗವಿಸಿದ್ದೇಶ್ವರರ ಜಾತ್ರೆಯು

ಸರಳತೆ ಸಾತ್ವಿಕತೆಯ ಪ್ರತಿರೂಪವು

ದಕ್ಷಿಣ ಭಾರತದ ಮಹಾಕುಂಭಮೇಳವು

ಶ್ರೀಮಠದ ಸಾಂಸ್ಕ್ರತಿಕ ಭವ್ಯಪರಂಪರೆಯು./2/

 

ಅರಿವಿನ ತ್ರಿವಿಧ ಮಹಾದಾಸೋಹವು

ಸರ್ವರ ಜಾಗ್ರೃತಿ-ಚಿಚ್ಛಕ್ತಿಯ ಪ್ರೇರಕವು

ಗ್ರಾಮೀಣ ಸೊಗಡಿನಆಟೋಟವು ಶುಚಿ-ರುಚಿ ಸಾತ್ವಿಕ ಆಹಾರವು./3/

 

ಕಣ್ಮನ ಸೆಳೆಯುವ ಚಿತ್ತಚಿತ್ತಾರದ

ಬೆಳಕಿನ ದೀಪಗಳ ರಂಗೋಲಿಯು.

ಆಯಸ್ಕಾಂತದಂತಹ ಕಲಾಸಾಗರೋತ್ಸವವು

ವಿಶೇಷಚೇತನರ ಕಲ್ಯಾಣ ಮಹೋತ್ಸವವು/4/.

 

ಪ್ರವಚನ ಚಿಂತನ ಸಂಗೀತ-ಸಾಹಿತ್ಯಮೇಳವು

ಮನಾಕರ್ಷಕ ಮನರಂಜನೆಯು.

ದೇಶಿ ಶೖಲಿಯ ವೇಷಭೂಷಣಗಳು

ಜಾನಪದರ ವಿಧವಿಧ ಕ್ರೀಡೆಗಳು./5/

 

ದೇಶಿ ಸಂಸ್ಕ್ರೃತಿಯ ಹಿರಿಮೆ-ಗರಿಮೆಯನು

ವಿಶ್ವಕೆ ಸಾರಿಸಾರಿ ಅರುಹುತಲಿಹವು.

'ಮನುಕುಲಂ ತಾನೊಂದೇ ವಲಂ'

ಭಾವೖಕೖತೆ ಪ್ರತಿಬಿಂಬಿಸುವಂತಿಹವು./6/

 

ಸರ್ವರಿಗೆ ಸ್ಪೂರ್ತಿಯ ಸೆಲೆಯು

ಉತ್ಸಾಹ-ಪ್ರೋತ್ಸಾಹದ ಕಾರಂಜಿಯು

ಹ್ರೃದಯಾನಂದ ಕಣ್ಮನಕೋರೖಸುವ ಚೖತನ್ಯದಚಿಲುಮೆಯಂತಿಹುದು./7/

 

ಸಪ್ತಸಾಗರದೋಪಾದಿಯಲಿಹುದು

ಸದ್ಭಕ್ತರ ಆರೋಗ್ಯ ಮಹಾಮೇಳವು

ಕೊಪ್ಪಳದ ಗವಿಸಿದ್ದೇಶ್ವರರ ಮಹಾಪರಿಷೆಯ

ವೖಭವವನು ಬಣ್ಣಿಸಲು ಪದಗಳೇ ಸಾಲವು./8/



ಪ್ರೊ.ಶಕುಂತಲಾ.ಚನ್ನಪ್ಪ.ಸಿಂಧೂರ.

ಕವಯಿತ್ರಿ,ಸಾಹಿತ್ಯಚಿಂತಕರು.

ಗದಗ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ