LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಲಾರಿಗೆ ಮಹೇಂದ್ರ ಟ್ರಕ್ ಡಿಕ್ಕಿ : ಸ್ಥಳದಲ್ಲೇ 4 ಸಾವು

ಮೊಳಕಾಲ್ಮುರು :  ದಾವಣಗೆರೆಯಿಂದ ಬಳ್ಳಾರಿಗೆ ಕಡೆಗೆ ಹೋಗುವ ಮಹೇಂದ್ರ ಟ್ರಕ್  ಸಂಖ್ಯೆ KA 34 D 1105 ವಾಹನವು ಬೈರಾಪುರದ ಯರಬಳ್ಳಿ ಮಾರೆಮ್ಮ ದೇವಸ್ಥಾನದ ಹತ್ತಿರ ಲಾರಿ KA 06 AA 4728ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ನಾಲ್ಕು ಜನ ಮೃತ ಪಟ್ಟಿರುತ್ತಾರೆ ಎಂದು ಮಾಹಿತಿ ಲಭ್ಯವಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ಬೈರಾಪುರ ಗ್ರಾಮದ ಹತ್ತಿರ ಇರುವ ಯರಬಳ್ಳಿ ಮಾರೆಮ್ಮ ದೇವಸ್ಥಾನದ ಪಕ್ಕ ಶ್ರೀ ಬಾಬಾ ಢಾಭಾ ಎದುರುಗಡೆ ರಸ್ತೆಯಲ್ಲಿ ಮಹಿಂದ್ರಾ ಸೂಪರ್ ಫ್ರಾಫಿಟ್ ಟ್ರಕ್ ಯೊಂದು ಲಾರಿಗೆ ಡಿಕ್ಕಿ ಹೊಡೆದ ರಬಸಕ್ಕೆ ಮಹಿಂದ್ರ ನುಜ್ಜು ನುಜ್ಜಾಗಿದೆ. ವಾಹನದಲ್ಲಿದ್ದ ಶಿವಮ್ಮ ಗಂಡ ವೆಂಕಟೇಶ್ 28ವರ್ಷ, ಮೀನಾಕ್ಷಿ ತಂದೆ ಗೋವಿಂದ 14ವರ್ಷ, ಪೂಜಾ ತಂದೆ ವೆಂಕಟೇಶ್ 4ವರ್ಷ ಹಾಗೂ ಪುರುಷೋತ್ತಮ್ ತಂದೆ ವೆಂಕಟೇಶ್ 2ವರ್ಷದ ಒಟ್ಟು ನಾಲ್ಕು ಜನರು ಕೊರಚ ಜನಾಂಗಕ್ಕೆ ಸೇರಿದ್ದು ಗುಡಾರ ನಗರ ಬಳ್ಳಾರಿಗೆ ಸೇರಿದವರಾಗಿದ್ದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾರೆ. ವಾಹನ ಚಾಲಕ ವೆಂಕಟೇಶ್ ತಂದೆ ದುರುಗಪ್ಪ ಸುಮಾರು 28ವರ್ಷ ವಯಸ್ಸಾಗಿದ್ದು ಸ್ಥಿತಿ ಚಿಂತಾಜನಕವಾಗಿದ್ದು ಗಂಭೀರವಾದ ಗಾಯಗಳಾಗಿವೆ ಹಾಗೂ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕಳಿಸಲಾಗಿದೆ.

news_1779905568_6_132.webp

 

ಅಪಘಾತ ನಡೆದ ಸ್ಥಳಕ್ಕೆ ಚಳ್ಳಕೆರೆ ಡಿ ವೈ ಎಸ್ ಪಿ ಸತ್ಯನಾರಾಯಣ ರಾವ್, ಮೊಳಕಾಲ್ಮುರು ಆರಕ್ಷಕ ಠಾಣೆ ವೃತ್ತ ನೀರಿಕ್ಷಕರು ನಾಗರಾಜ್, ಮೊಳಕಾಲ್ಮುರು ಠಾಣೆ ಉಪ ನೀರಿಕ್ಷಕರು ಮಹೇಶ್  ಎಸ್ ಹೊಸಪೇಟೆ ಭೇಟಿ ನೀಡಿ ಪ್ರಕರಣವನ್ನು ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ