LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ನಾಳೆಯಿಂದ ರಾಜೇಶ್ವರಿನಗರದಲ್ಲಿ ಪಾಂಡುರಂಗಸ್ವಾಮಿ ಸಪ್ತಾಹ

ಬಳ್ಳಾರಿ: ಶ್ರಾವಣ ಮಾಸದ ಪ್ರಯುಕ್ತ ಜಗನ್ನಿಯಾಮಕ ಶ್ರೀಹರಿ ವಿಠ್ಠಲ ಪಾಂಡುರಂಗ ರುಕ್ಮಿಣಿ ಸಪ್ತಾಹ ಆಚರಣೆ ಇಲ್ಲಿನ ಎಂ.ರಾಜೇಶ್ವರಿ ನಗರದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

 

ನಗರದ ಹಿರಿಯ ಸಂತರಾದ ಡಾ.ಎಸ್.ಎನ್.ಶಾಸ್ತ್ರಿ ವಿ.ಲಕ್ಷ್ಮಣರಾವ್, ಎಸ್.ವಿಶ್ವನಾಥ ಶಾಸ್ತ್ರಿ ವಿ.ನಲ್ಲಾರೆಡ್ಡಿ ಮತ್ತು ವಿ.ಪಾಂಡುರಂಗ ಹಾಗೂ ಇತರೆ ಎಲ್ಲ ಸಂತರ ಸಂಕಲ್ಪದಂತೆ ಕಳೆದ 8 ವರ್ಷಗಳಿಂದಲೂ ಅತ್ಯಂತ ಶ್ರದ್ಧಾಭಕ್ತಿಯಿಂದ ಶ್ರಾವಣ ಮಾಸದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಅಂಗವಾಗಿ ಜು.25ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೋತಿ ಸ್ಥಾಪನೆ, ಸಂಜೆ 4-30ರಿಂದ ಪ್ರವಚನ ಮತ್ತು ನಾಮ ಜಪ, ರಾತ್ರಿ 7 ರಿಂದ 9 ಗಂಟೆಯವರೆಗೆ ಕನ್ನಡದಲ್ಲಿ ಕೀರ್ತನೆ ನಡೆಯಲಿದೆ.



ಜು.26 ಶನಿವಾರದಂದು ಬೆಳಿಗ್ಗೆ 5 ರಿಂದ 6 ಗಂಟೆಯವರೆಗೆ ಕಾಕಡ ಆರತಿ, ಬೆಳಿಗ್ಗೆ 7-30ರಿಂದ ಶ್ರೀ ಜ್ಞಾನೇಶ್ವರಿಯ 9 ಮತ್ತು 12ನೇ ಅಧ್ಯಾಯದ ಸಾಮೂಹಿಕ ಪಾರಾಯಣ, ಬೆ.11ರಿಂದ ಮಧ್ಯಾಹ್ನ 1ಗಂಟೆಯವರೆಗೆ ಭಜನೆ, ಸಂಜೆ 4-30ರಿಂದ 6 ಗಂಟೆಯವರೆಗೆ ಪ್ರವಚನ ಮತ್ತು ನಾಮ ಜಪ, ರಾತ್ರಿ 7 ರಿಂದ 8 ಗಂಟೆಯವರೆಗೆ ಕೀರ್ತನೆ, ಜು.27ರಂದು ಭಾನುವಾರ ಬೆಳಿಗ್ಗೆ 5 ರಿಂದ 6 ಗಂಟೆಯವರೆಗೆ ಕಾಕಡ ಆರತಿ, ಬೆಳಿಗ್ಗೆ 9 ಗಂಟೆಯಿಂದ ಶ್ರೀ ಪಾಂಡುರಂಗಸ್ವಾಮಿ ಮತ್ತು ರುಕ್ಮಿಣಿ ದೇವಿಯ ಮೂರ್ತಿಗಳ ಭವ್ಯ ಮೆರವಣಿಗೆಯೊಂದಿಗೆ ನಗರ ಪ್ರದಕ್ಷಿಣೆ, ದಿಂಡಿ ಮಹೋತ್ಸವ, ಬಳಿಕ ಮಹಾಮಂಗಳಾರತಿ ಜರುಗಲಿದೆ. ಮಧ್ಯಾಹ್ನ 12ಗಂಟೆಯಿಂದ ಸಂತರ ಸಮಾರಾಧನೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ