LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ರಸ್ತೆಗಳ ಮೇಲೆ ಅನಧಿಕೃತ ಕಾಮಗಾರಿ ನಿರ್ಮಾಣ ತಡೆಯಿರಿ

ತಹಸೀಲ್ದಾರ್ ಅಮರೇಶ ಬೀರಾದರಗೆ ನಮ್ಮ ಕರ್ನಾಟಕ ಸೇನೆ ಮನವಿ.

 ಅರಕೇರಾ : ಇತ್ತಿಚೆಗೆ ನಿರ್ಮಾಣವಾದ ರಸ್ತೆಗಳ ಮೇಲೆ  ಅನಧಿಕೃತ ಕಾಮಗಾರಿಗಳನ್ನು ಮಾಡುವ ಮೂಲಕ ರಸ್ತೆಗಳನ್ನು  ಹದಗೆಡಿಸಲಾಗುತ್ತಿದೆ ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಆರೋಪಿಸಿದರು.

ಪಟ್ಟಣದಲ್ಲಿ ತಹಸೀಲ್ದಾರ್ ಅಮರೇಶ ಬೀರಾದರಗೆ ಗುರುವಾರ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಪಡಗಿನದೊಡ್ಡಿ ಮಾತನಾಡಿ, ದೇವದುರ್ಗ ಮತ್ತು ಅರಕೇರಾ ತಾಲೂಕು ವ್ಯಾಪ್ತಿಯಲ್ಲಿ ನಿರ್ಮಾಣವಾದ ರಸ್ತೆಗಳ ಮೇಲೆ ಜಿಯೋ ಕೇಬಲ್, ಕೆರೆ ನಿರ್ಮಾಣಕ್ಕೆ ಪೈಪ್ ಲೈನ್, ಜೆಜೆಎಂ ಜಲಧಾರೆ ಯೋಜನೆಯ ಪೈಪ್‌ಲೈನ್ ಕಾಮಗಾರಿಗಳನ್ನು ಮಾಡುತ್ತಿದ್ದು, ರಸ್ತೆ ಎಡ ಮತ್ತು ಬಲ ಭಾಗದ ರಸ್ತೆಭುಜಗಳನ್ನು ಅವೈಜ್ಞಾನಿಕವಾಗಿ ಅಗೆಯಲಾಗುತ್ತಿದೆ. ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ರಸ್ತೆಗಳನ್ನು ನಿಯಮ ಉಲ್ಲಂಘಿಸಿ ಮನಬಂದಂತೆ ಅಗೆದು ಮುಚ್ಚುತ್ತಿದ್ದಾರೆ. ಇದರಿಂದ ರಸ್ತೆಗಳು ತಮ್ಮ ಗುಣಮಟ್ಟ ಕಾಪಾಡಿಕೊಳ್ಳಲು ಹೇಗೆ ಸಾಧ್ಯವಾಗುತ್ತದೆ ಎಂದು ದೂರಿದರು.

ವಿವಿಧ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿ ಆಯಾ ಇಲಾಖೆಗಳ ಮೂಲಕ ನಿಯಮಾನುಸಾರವಾಗಿ ರಸ್ತೆಯಿಂದ 15 ಮೀಟರ್ ಬಿಟ್ಟು ಆಳವಡಿಸಬೇಕು. ರಸ್ತೆಯ ಮೇಲೆ ಪೈಪುಗಳನ್ನು ಪಾಕುವುದರಿಂದ ಪಾದಾಚಾರಿ, ದ್ವಿಚಕ್ರ ವಾಹನ, ಕಾರು, ಬಸ್ಸುಗಳ ಮತ್ತು ಭಾರೀ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಲ್ಲದೇ ಎಷ್ಟೋ ಜನ ದ್ವಿಚಕ್ರವಾಹನ ಸವಾರರು ಅಪಘಾತಗಳು ಮಾಡಿಕೊಂಡು ಆಸ್ಪತ್ರೆಗೆ ಸೇರಿ ಸುಮ್ಮನೆ ಮನೆಗೆ ಹೋಗಬೇಕಾಗಿದೆ. ಈ ರಸ್ತೆಯ ಅಕ್ರಮ ಕಾಮಗಾರಿಯ ಕುರಿತು ಯಾವ ಇಲಾಖೆಗೆ ದೂರು ಸಲ್ಲಿಸಬೇಕೆಂಬುದು ಸಾರ್ವಜನಿಕರಿಗೆ ಅರ್ಥವಾಗದಂತಾಗಿದೆ ಎಂದರು.



ಅಲ್ಲದೇ ರಾಯಚೂರು-ತಿಂಥಣಿ ಮತ್ತು ದೇವದುರ್ಗ-ಅರಕೇರಾ-ಸಿರವಾರ ರಸ್ತೆ ಕೆ.ಆರ್.ಡಿ.ಸಿ.ಎಲ್. ವತಿಯಿಂದ ಕಾಮಗಾರಿ ನಿರ್ಮಾಣವಾಗಿದೆ. ಜಿಯೋ ಮತ್ತು ಜೆಜೆಎಂ ಜಲಧಾರೆ ಯೋಜನೆಯ ಪೈಪ್ ಅಳವಡಿಸಲು ಯಾವ ರೀತಿ ಅನುಮತಿ ನೀಡಿದ್ದಾರೆಂಬುದು ಖಚಿತವಾಗಬೇಕಿದೆ ಎಂದರು.

   ಈ ಸಂದರ್ಭದಲ್ಲಿ ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು   ಜಿಲ್ಲಾಧ್ಯಕ್ಷ ಕೊಂಡಪ್ಪ ಕೆ, ವೆಂಕಟೇಶ್ ಗುತ್ತೇದಾರ್ ಮಲೆ ದೇವರಗುಡ್ಡ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ನಾಯಕ ಪಡಗಿನದೊಡ್ಡಿ, ದೇವದುರ್ಗ ತಾಲೂಕ ಅಧ್ಯಕ್ಷ  ಭೀಮನಗೌಡ ಎಂ ಪಾಟೀಲ್, ಹಾಗೂ ಪದಾಧಿಕಾರಿಗಳು   ಇದ್ದರು.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ