LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಐವರು ಅಂತರಾಜ್ಯ ಕಳ್ಳರನ್ನು ಬಂಧಿಸಿದ ತುರವನೂರು ಪೊಲೀಸರು

ಚಿತ್ರದುರ್ಗ :ತಾಲೂಕಿನ  ತುರುವನೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಐದು ಮಂದಿ ಕಳ್ಳರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಧ್ಯ ಪ್ರದೇಶ ಮೂಲದ ಟೋನಿಯಾ, ಕಮಲ್ ನಾಥ್, ಶ್ರವಣ್ ಜೋಗಿ, ಜೈನನಾಥ್ ಚೌಹಾಣ್ ಹಾಗೂ ಸಂತೋಷ್ ನಾಥ್ ಎಂಬ ಐದು ಮಂದಿ ಕಳ್ಳರನ್ನ ಪೊಲೀಸರು ಬಂದಿಸಿ ಕರೆತಂದಿದ್ದಾರೆ.

ಚಿಕ್ಕಗೊಂಡನಹಳ್ಳಿ ಗ್ರಾಮದ ರವಿಕುಮಾರ್ ಎಂಬುವವರು ಸೆಪ್ಟೆಂಬರ್‌ 2 ರಂದು ರಾಷ್ಟ್ರೀಯ ಹೆದ್ದಾರಿ 50 ರ ಟ್ರಕ್ ಟರ್ಮಿನಲ್ ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು ಕೆಲಸ ಮುಗಿಸಿ ಮಧ್ಯಾಹ್ನ 1 ಗಂಟೆ ವೇಳೆಗೆ ಪಾಪಾಸ್ ಮನೆಗೆ ಹೋರಟಿದ್ದು,  ಈ ವೇಳೆ ಕಾರಿನಲ್ಲಿ ಸಾಧುಗಳ ವೇಶದಲ್ಲಿ ಬಂದ ಐವರಲ್ಲಿ ಕಾರಿನ ಚಾಲಕ ಬಿಟ್ಟು ಇನ್ನೂ ನಾಲ್ವರು ರವಿಕುಮಾರ್ ಅವರ ಬಳಿ ಬಂದಿದ್ದು ಜಮೀನಿನ ಮೆಕ್ಕೆಜೋಳ ತೆನೆ ಮುರಿದುಕೊಳ್ಳುತ್ತಿದ್ದು, ಈ ವೇಳೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಸಾಧುಗಳು  ರವಿಕುಮಾರ್ ಅರವಿಗೆ ಭವಿಷ್ಯ ಹೇಳುವುದಾಗಿ ನಂಬಿಸಿ ಬೇಡವೆಂದರು ಅವರ ಕೈಮೇಲೆ ರುದ್ರಾಕ್ಷಿ ಹಾಗೂ ಐದು ರೂಪಾಯಿ ಕಾಯಿನ್ ಇಟ್ಟು ರವಿಕುಮಾರ್ ಅವರ ಕೈನಲ್ಲಿದ್ದ 5 ಗ್ರಾಂ ತೂಕದ ಬಂಗಾರದ ಉಂಗುರವನ್ನ ಎಗರಿಸಿದ್ದು,  ಅದರಲ್ಲೊಬ್ಬ ಸಾಧು ಪೌಡರ್ ಒಂದನ್ನ ರವಿಕುಮಾರ್ ಅವರ ಹಣೆಯ ಮೇಲೆ ಹಚ್ಚಿದ್ದು ಈ ವೇಳೆ ಮಂಪರು ಬಂದಂತಾಗಿದ್ದು , ರವಿಕುಮಾರ್ ಅವರು ಏನನ್ನು ಸಹ ಮಾಡಲಾಗದ ಪರಿಸ್ಥಿತಿಯಲ್ಲಿ ಇದ್ದರು.‌



ನಂತರ ಎಚ್ಚರಗೊಂಡ ರವಿಕುಮಾರ್ ಅವರು ನೋಡಿದಾಗ ಕಳ್ಳರು ಕಾರಿನಲ್ಲಿ ಕೂತುಕೊಂಡು ಹೊರಟಿದ್ದು ರವಿಕುಮಾರ್ ಅವರು ಕಿರುಚಿಕೊಂಡರೂ ಅಷ್ಟರಲ್ಲಾಗಲೇ ಕಳ್ಳರು ಎಸ್ಕೇಪ್ ಆಗಿದ್ದರು. ಇನ್ನೂ ಈ ಬಗ್ಗೆ ಪ್ರಖರಣ ಧಾಖಲಿಸಿಕೊಂಡ ತುರುವನೂರು ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಟೋಲ್ ಗಳ ಸಿಸಿ ಟಿವಿಗಳಲ್ಲಿ ಆರೋಪಿಗಳು ಕಾರಿನಲ್ಲಿ ತೆರಳಿದ್ದ ಬಗ್ಗೆ ಮಾಹಿತಿ ಪಡೆದು ಕಳ್ಳಂಬೆಳ್ಳ ಟೋಲ್ ಬಳಿ ಕಾರಿನ ಸಮೇತ  ಐದು ಮಂದಿ ಸಾದು ಕಳ್ಳರನ್ನ ವಶಕ್ಕೆ ಪಡೆದು ಬಂದಿಸಿ ಕರೆತಂದಿದ್ದು ಹೆಚ್ಚಿನ ಪರಿಶೀಲನೆಯನ್ನ ನಡೆಸುತ್ತಿದ್ದಾರೆ.
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ