LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಆಷಾಢ ಮಾಸ : ಕೌಲ್ ಬಜಾರ್ ನಲ್ಲಿ ಪಂಢರಿನಾಥನ ಆರಾಧನೆ

ಬಳ್ಳಾರಿ : ಆಷಾಢ ಮಾಸದ ಪ್ರಯುಕ್ತ ಕೌಲ್ ಬಜಾರ್ ನ ಭಾವಸಾರ ಕ್ಷತ್ರಿಯ ಸಮಾಜದವತಿಯಿಂದ ಪಂಢರಿನಾಥನ ಪೂಜೆ ಹಾಗೂ ವಿವಿಧ ಧಾರ್ಮಿಕ ಆಚರಣೆಗಳು ನಡೆದವು.

 

ಇಲ್ಲಿನ ಟೇಲರ್ ಬೀದಿಯಲಿ ರುವ ಶ್ರೀ ಪಾಂಡುರಂಗ ದೇವಸ್ಥಾನ ದಲ್ಲಿ ಆಷಾಡ ಬಹುಳ ಏಕಾದಶಿ ಅಂಗವಾಗಿ ಆಯೋಜಿಸಿದ್ದ ಧಾಮಿ೯ಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾಯ೯ಕ್ರಮಗಳೂ ನಡೆದವು. ಪ್ರತಿನಿತ್ಯ ಬೆಳಿಗ್ಗೆ ಕಾಕಡಾರತಿ, ಜ್ಞಾನೇಶ್ವರಿ ಪಾರಾಯಣ, ಮಧ್ಯಾಹ್ನ ಪಂಢರಿ ಸಾಂಪ್ರದಾಯಕ ಭಜನೆ, ದಿಂಡಿ ಸೋಹಳಾ ನಡೆದವು.

 

ಸಂಜೆಯ ಹೊತ್ತು ಭಾರತಿ ನಾಟ್ಯ ಕಲಾ ಟ್ರಸ್ಟ್ ನ ವೈಷ್ಣವಿ ಕುಲಕಣಿ೯ ಮತ್ತು ತಂಡವದವರಿಂದ ಭರತನಾಟ್ಯ, ಕೋಲಾಟ, ಭಜನಾ ತಂಡಗಳಿಂದ ಸಂಗೀತ ಹಾಗೂ ಭಜನೆ ನಡೆದವು. ಶ್ರೀ ಪಾಂಡುರಂಗ ರುಕ್ಮಿಣಿ ವಿಗ್ರಹಗಳಿಗೆ ರಜತ ಕವಚ ಧಾರಣೆ ಮಾಡಿ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಿದ್ದ ಭಕ್ತರು ಜಗತ್ತಿನ ತಂದೆ-ತಾಯಿಯರ ವೈಭವ ಕಂಡು ಭಕ್ತಿ ಪರವಶರಾದರು. ವಾರಕರಿ ಸಂತ ಸಮಾರಾಧನೆ ನಡೆಯಿತು. ದೇವಸ್ಥಾನ ದ ಅಚ೯ಕರಾದ ವೆಂಕಟೇಶಾಚಾರ್ ಪೂಜಾ ಕೈಂಕಯ೯ಗಳನ್ನು ನೇರವೇರಿಸಿದರು.

 



ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳಲ್ಲಿ ಹಾನಗಲ್, ಹೊಸಪೇಟಿ, ಕೊಪ್ಪಳ, ಬೆಳಗಾವಿ ಅಲ್ಲದೆ ಇನ್ನೂ ಹಲವಾರು ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳ ಭಜನಾ ಮಂಡಳಿಗಳು ಪಾಲ್ಗೊಂಡು ಭಗವಂತನನ್ನು ಹಾಡಿ, ಹಾರೈಸಿ, ಅರ್ಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತಿ ನಾಟ್ಯಕಲಾ ಟ್ರಸ್ಟಿನ ವೈಷ್ಣವಿ ಕುಲಕರ್ಣಿ ತಂಡದ ಕಲಾವಿದರಿಗೆ  ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

 

ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರಾದ ಎಲ್. ಶೀಧರ ರಾವ್, ಯು.ರಮೇಶರಾವ್, ಎಸ್. ದುಗೋ೯ಜಿರಾವ್, ಎಲ್. ರಮೇಶ್ ರಾವ್, ಎಲ್. ವಿಠ್ಠಲ್ ರಾವ್, ಆರ್. ಶ್ರೀನಿವಾಸರಾವ್ ಇನ್ನು ಮುಂತಾದದವರು ಉಪಸ್ಥಿತರಿದ್ದರು. 
Author
Visva Nudi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ