ಬೆಂಗಳೂರು: ಬೆಂಗಳೂರು ದಕ್ಷಿಣ ತಾಲ್ಲೂಕು ವ್ಯಾಪ್ತಿಯ ರಾಂಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿಯ ಸಂವಹನ ವಿಭಾಗದಲ್ಲಿ ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದ ನಿಮಿತ್ತ ಡಾ. ಈಶ್ವರ್ ಅವರನ್ನು ಅನನ್ಯ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ವೇಳೆ ಅನನ್ಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ರಂಜಿತ ರಾಜೇಶ್ ರಾಂಪುರ ಅವರು ಮಾತನಾಡಿ, ನಮ್ಮ ಮನೆಯ ಹೆಮ್ಮೆ, ನಮ್ಮೆಲ್ಲರ ಪ್ರೀತಿಯ ಹುಡುಗ, ನಮ್ಮ ಅನನ್ಯ ಕಂದನಾದ ಡಾ. ಈಶ್ವರ್ ಅವರು ಪಿಎಚ್.ಡಿ ಪದವಿಯನ್ನು ಯಶಸ್ವಿಯಾಗಿ ಪಡೆದಿರುವುದು ನಮ್ಮೆಲ್ಲರಿಗೂ ಅಪಾರ ಸಂತಸ ಮತ್ತು ಹೆಮ್ಮೆಯ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಈಶ್ವರ್ ಈ ಹಿಂದೆ ನಮ್ಮ ಅನನ್ಯ ಸಂಸ್ಥೆಯಲ್ಲಿ ತರಬೇತಿ ಪಡೆದು ರಾಜ್ಯದ ಪ್ರತಿಷ್ಠಿತ ದಿನಪತ್ರಿಕೆಗಳಲ್ಲಿ, ಸಂಜೆ ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇನ್ನೊಂದು ಪ್ರಮುಖ ವಿಷಯವೆಂದರೆ ಬೆಂಗಳೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸಂಶೋಧನಾ ವಿದ್ಯಾರ್ಥಿಯಾಗಿ ಇತ್ತೀಚೆಗೆ ತಮ್ಮ ಮಹಾಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದು ಹೆಮ್ಮೆಯ ಸಂಗತಿ ಎಂದರು.
ಡಾ. ಈಶ್ವರ್ ಅವರ ನಿರಂತರ ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಜ್ಞಾನದ ಹಂಬಲಕ್ಕೆ ಈ ಸಾಧನೆ ಒಂದು ಅದ್ಭುತ ಫಲವಾಗಿದೆ. ಈ ಮಹತ್ತರ ಕ್ಷಣದಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಅವರ ಮುಂದಿನ ಜೀವನ ಮತ್ತಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಇವರ ಈ ಸಾಧನೆ ನಮ್ಮೆಲ್ಲರಿಗೂ ಕೀರ್ತಿ ತಂದಿದ್ದು, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾಗಲಿ. ನಿಮಗೆ ಉತ್ತಮ ಆಯುರಾರೋಗ್ಯ ಹಾಗೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವ ಶಕ್ತಿ ನೀಡಲಿ ಎಂದು ಭವಿಷ್ಯದ ಬಗ್ಗೆ ಪ್ರೇರಣೆಯದಾಯಕವಾದ ಹಿತನುಡಿಗಳನ್ನು ಹೇಳಿದರು.
ಇದೇ ಸಮಯದಲ್ಲಿ ಅನನ್ಯ ಸಂಸ್ಥೆಯ ಸಂಸ್ಥಾಪಕ ಪ್ರದಾನ ಕಾರ್ಯದರ್ಶಿ ರಾಜೇಶ್ ರಾಂಪುರ, ಮರಿಲಿಂಗಮ್ಮ, ಜಯಲಕ್ಷ್ಮಿ, ರತ್ನಮ್ಮ, ಶಶಿಕಲಾ, ಕುಮಾರ್, ಯಶ್ವಂತ್, ಶಿಲ್ಪಶ್ರೀ, ಕೀರ್ತನ, ಮನ್ವಿತ್ ರಾಜ್, ಚಂದನ, ಕವನ, ಪೂರ್ಣಚಂದ್ರ, ಕಲಿಕಾರ್ಥಿ ಅಮರೇಶ್ ಸಿರಿಗೇರಿ ಮತ್ತಿತರರು ಸೇರಿದಂತೆ ಅನನ್ಯ ಬಳಗದವರು ಉಪಸ್ಥಿತರಿದ್ದರು.
ಡಾ. ಈಶ್ವರ್ ಅವರ ನಿರಂತರ ಪರಿಶ್ರಮ, ಶಿಸ್ತು, ಸಂಕಲ್ಪ ಮತ್ತು ಜ್ಞಾನದ ಹಂಬಲಕ್ಕೆ ಈ ಸಾಧನೆ ಒಂದು ಅದ್ಭುತ ಫಲ, ಈ ಮಹತ್ತರ ಕ್ಷಣದಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಅವರ ಮುಂದಿನ ಜೀವನ ಮತ್ತಷ್ಟು ಯಶಸ್ಸು, ಗೌರವ ಮತ್ತು ಸಾಧನೆಗಳಿಂದ ಕೂಡಿರಲಿ.
- ರಾಜೇಶ್ ರಾಂಪುರ, ಕಾರ್ಯದರ್ಶಿ, ಅನನ್ಯ ಸಂಸ್ಥೆ