LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಕಾರ್ಗಿಲ್ ವಿಜಯ್ ದಿವಸ್: ಕಾರ್ಗಿಲ್ ಸಮರ ಸೇನಾನಿಗಳಿಗೆ ಸನ್ಮಾನ

ಬೆಂಗಳೂರು :  ಕಾರ್ಗಿಲ್ ವಿಜಯ್ ದಿನದ ಹಿನ್ನೆಲೆಯಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಹಾಗೂ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ನಗರದ ನಯನ ಸಭಾಂಗಣದಲ್ಲಿ  ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಸೇನಾನಿಗಳನ್ನು ಗೌರವಿಸಲಾಯಿತು.

ಡಾಕ್ಟರ್ಸ್ ಡೇ, ಪತ್ರಿಕೋದ್ಯಮ ದಿನ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾರ್ಗಿಲ್ ಸಮರ ವೀರನ್ನು ಸನ್ಮಾನಿಸಲಾಯಿತು.

ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ಬಿ.ಕೆ. ಕುಮಾರ ಸ್ವಾಮಿ ಮಾತನಾಡಿ, 1999 ಇದೇ ಅವಧಿಯಲ್ಲಿ ನಾವೆಲ್ಲಾ ಕಾರ್ಗಿಲ್ ಸಮರ ಭೂಮಿಯಲ್ಲಿ ಹೋರಾಟ ಮಾಡುತ್ತಿದ್ದೇವು. ದೇಶ ರಕ್ಷಣೆಗಾಗಿ ನಾವು ಟೊಂಕಕಟ್ಟಿ ನಿಂತೆವು. ಇದು ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ದಿನಗಳು ಎಂದು ಸ್ಮರಿಸಿಕೊಂಡರು.

news_1785243579_2_969.webp

 

ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ದೇಶದ ಗಡಿ ಕಾಪಾಡುವ ಯೋಧರು, "ವೈದ್ಯೋ ನಾರಾಯಣೋ ಹರಿಃ" ಎಂಬ ಮಾತಿಗೆ ತಕ್ಕಂತೆ ಜನರ ಆರೋಗ್ಯ ಕಾಪಾಡುವ ವೈದ್ಯರು ಹಾಗೂ ಸತ್ಯವನ್ನು ನಿರ್ಭೀತಿಯಿಂದ ಸಮಾಜದ ಮುಂದೆ ತರುವ ಪತ್ರಕರ್ತರ ಸೇವೆ ಅಮೂಲ್ಯವಾಗಿದೆ. ಇಂತಹ ಮಹನೀಯರನ್ನು ಗೌರವಿಸುವ ಅವಕಾಶ ದೊರೆತಿರುವುದು ಸಂತಸದ ವಿಷಯ ಎಂದು ಹೇಳಿದರು.

ಪತ್ರಕರ್ತ ನಂಜುಂಡಪ್ಪ.ವಿ ಮಾತನಾಡಿ, ಭಾರತದ ಪ್ರತಿಯೊಬ್ಬ ಪ್ರಜೆಗೂ ದೇಶ ಮೊದಲು. ಪ್ರತಿಯೊಬ್ಬರೂ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ಕಾರ್ಗಿಲ್  ಯೋಧರು ನಮ್ಮ ದೇಶದ ಹೆಮ್ಮೆ. ಅವರನ್ನು ಗೌರವಿಸುವುದು ನಮ್ಮನ್ನೇ ನಾವು ಗೌರವಿಸಿಕೊಂಡಂತೆ ಎಂದರು.

ಹಿರಿಯ ಸೇನಾನಿ ಸರವಣ ಹವಾಲ್ದಾರ್, ಇದು ನಿಮ್ಮ ವಾಹಿನಿ ಕಲಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ.ಎಸ್., ಚಂದ್ರಿಕಾ ಬಿ.ವಿ. ಅನೇಕ ಗಣ್ಯರು ಸೇರಿದಂತೆ ಪದಾಧಿಕಾರಿಗಳು  ಉಪಸ್ಥಿತರಿದ್ದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಚಲನಚಿತ್ರೋತ್ಸವ ಯಶಸ್ವಿಗೊಳಿಸಿ-ಡಾ.ಕಲ್ಮೇಶ ಹಾವೇರಿಪೇಠಉತ್ತಮ ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ: ಖ್ಯಾತ ಸಾಹಿತಿ ಡಾ. ಸತ್ಯಮೂರ್ತಿ ಗೂಗಿ ಅಭಿಮತಪೆಟ್ರೋಲಿಯಂ ದರಗಳ ಏರಿಕೆ ನಡುವೆ, ವಿದ್ಯುನ್ಮಾನ ವಾಹನಗಳಿಗೆ ಸುಗ್ಗಿ ಕಾರ್ಗಿಲ್ ವಿಜಯ್ ದಿವಸ್: ಕಾರ್ಗಿಲ್ ಸಮರ ಸೇನಾನಿಗಳಿಗೆ ಸನ್ಮಾನ ಮಣಿಪಾಲ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ ಅಳವಡಿಕೆ ಶಾಸಕ ಕೆ.ಸಿ ವೀರೇಂದ್ರ ಪಪ್ಪಿಗೆ ಮಂತ್ರಿ ಸ್ಥಾನ ಸಿಗುವಂತೆ ದೇವರಲ್ಲಿ ಪ್ರಾರ್ಥನೆಗುಡಿಹಾಳ (ಜೆ) ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಿಯುಸಿ ತರಗತಿಗಳು ಆರಂಭಪ್ರತಿಭಟನೆ ನಿರತ ನೀಟ್ ವಿದ್ಯಾರ್ಥಿಗಳ ಮೇಲೆ ಬ್ರಿಟೀಷರಿಗಿಂತ ಕ್ರೂರತೆ ಮೆರೆದ ಅಮಿತ್ ಶಾ ವಜಾಗೊಳಿಸಿ ಅಗಲಿದ ನಾಯಕನಿಗೆ 26ಕ್ಕೆ ನುಡಿನಮನಜು. 26ರಂದು ವೈದ್ಯರು, ಪತ್ರಿಕೋದ್ಯಮ ಹಾಗೂ ಕಾರ್ಗಿಲ್ ವಿಜಯ್ ದಿವಸ್ ಆಚರಣೆ