LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಬೆಂಗಳೂರು ವಿವಿಯ ಕೆಮಿಸ್ಟ್ರಿ ಸಂಶೋಧಕರಿಗೆ ಭಾರತೀಯ ಪೇಟೆಂಟ್ ಅನುದಾನಕ್ಕೆ ಅಯ್ಕೆ

ಬೆಂಗಳೂರು :  ಭಾರತ ಸರ್ಕಾರದ ಅಡಿಯಲ್ಲಿ ಬರುವ ಭಾರತೀಯ ಪೇಟೆಂಟ್ಕಚೇರಿ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಕೊಡಮಾಡುವ ಉತೃಷ್ಟ ಸಂಶೋಧನೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಜಿ. ಕೃಷ್ಣಮೂರ್ತಿ , ಅವರ ಸಂಶೋಧನಾ ತಂಡವು ಆಯ್ಕೆಯಾಗಿದ್ದಾರೆ.

 

ಸಂಶೋದನಾ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್  ಸಪೋರ್ಟೆಡ್  ಐರನ್- ಮಾಫ್ (Fe-MOF) : ಸೆಲ್ಫ್ - ಕ್ಲೀನಿಂಗ್ ಮೆಂಬ್ರೇನ್"  ಹೊಸ ಆವಿಷ್ಕಾರಕ್ಕಾಗಿ ಪ್ರೊ. ಜಿ. ಕೃಷ್ಣಮೂರ್ತಿ ಹಾಗೂ ಅವರ ಸಂಶೋಧನಾ ತಂಡ ಭಾರತೀಯ ಪೇಟೆಂಟ್ಅನುದಾನಕ್ಕೆ ಭಾಜನರಾಗಿದ್ದಾರೆ.

 

ಐರನ್- ಮಾಫ್ (Fe-MOF) : ಮೂವರು ವಿದೇಶಿ ರಸಾಯನಶಾಸ್ತ್ರಜ್ಞರು 2025 ರಸಾಯನಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡ ವರ್ಗದ ವಸ್ತುವಾಗಿದೆ. ಪ್ರೊ. ಜಿ. ಕೃಷ್ಣಮೂರ್ತಿ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್  ಸಪೋರ್ಟೆಡ್ ಐರನ್- ಮಾಫ್ (Fe-MOF) ವಿವಿಧ ಅನ್ವಯಿಕೆಗಳಿಗೆ ಆಕರ್ಷಕ ವಸ್ತುವಾಗಿದೆ.

 

ಐರನ್- ಮಾಫ್ (Fe-MOF) ಎಂಬುದು ಸ್ವಯಂ ಶುದ್ಧೀಕರಣ ಹಾಗೂ ಕಲುಷಿತ ನಿರೋಧಕ, ಜಲ ಶೋಧನೆಗೆ ಅತ್ಯಂತ ಭರವಸೆಯ ಉನ್ನತ ವಸ್ತುವಾಗಿವೆ. ವಿಶೇಷವಾಗಿ ಮಲಿನಜಲ ಶುದ್ಧೀಕರಣ ಮತ್ತು ಎಣ್ಣೆ-ನೀರು ವಿಭಜನೆ ಕ್ಷೇತ್ರಗಳಲ್ಲಿ, ಕೈಗಾರಿಕಾ ತ್ಯಾಜ್ಯ ನೀರಿನಲ್ಲಿರುವ ವಿಷಕಾರಿ ಬಣ್ಣಗಳನ್ನು ಪರಿಸರ ಸ್ನೇಹಿ ವಸ್ತುಗಳಾಗಿ ಪರಿವರ್ತಿಸುವ ಪ್ರಕ್ರಿಯೆಯಲ್ಲಿ ಉಪಯುಕ್ತವಾಗಿವೆ.

 

ಮಹತ್ವದ ಶೈಕ್ಷಣಿಕ ಸಾಧನೆಗೆ ಬೆಂಗಳೂರು ವಿವಿಯ ಕುಲಪತಿ ಪ್ರೊ. ಜಯಕರ್ ಎಸ್.ಎಂ, ಆಡಳಿತ ವರ್ಗ, ಪ್ರಾಧ್ಯಾಪಕರ ವರ್ಗದವರು ಸೇರಿದಂತೆ ಮತ್ತಿತರರು ಸಂಶೋಧನಾ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ, ಪ್ರಶಂಸಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

 

ಐರನ್- ಮಾಫ್ (Fe-MOF) ಮೂವರು ವಿದೇಶಿ ರಸಾಯನಶಾಸ್ತ್ರಜ್ಞರು 2025 ರಸಾಯನಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಹಂಚಿಕೊಂಡ ವರ್ಗದ ವಸ್ತುವಾಗಿದೆ. ಪ್ರೊ. ಜಿ. ಕೃಷ್ಣಮೂರ್ತಿ ಮತ್ತು ಅವರ ತಂಡವು ಅಭಿವೃದ್ಧಿಪಡಿಸಿದ ಪಾಲಿಮರ್ ಮ್ಯಾಟ್ರಿಕ್ಸ್  ಸಪೋರ್ಟೆಡ್ ಐರನ್- ಮಾಫ್ (Fe-MOF) ವಿವಿಧ ಅನ್ವಯಿಕೆಗಳಿಗೆ ಆಕರ್ಷಕ ವಸ್ತುಗೆ ಸಾಕ್ಷಿಯಾಗಿದೆ.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ