LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary

ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮ

ಬಳ್ಳಾರಿ: ಪವಾಡಗಳ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಯ 20ನೇ ವರ್ಷದ ಶ್ರಾವಣ ಮಾಸದ ೨ನೇ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಇದೇ ಆಗಸ್ಟ್ 24ರಿಂದ ಬೆಳಗಿನ ಜಾವ 4 ಗಂಟೆಯ ಬ್ರಾಹ್ಮೀ ಮುಹೂರ್ತದಲ್ಲಿ ಅದ್ದೂರಿ ಹಾಗೂ ಆಸ್ತಿಕ ಮನೋಭಾವನೆಗಳಿಂದ ಆರಂಭಿಸಲಾಗುತ್ತಿದೆ.

ಈ ಕುರಿತು ಶ್ರೀ ಗುರು ಅಜ್ಜಯ್ಯ ಹಾಗೂ ಹೇಮಜ್ಜಯ್ಯ ಸೇವಾ ಸಮಿತಿ (ರಿ) ಅಧ್ಯಕ್ಷರು ಹಾಗೂ ವಕೀಲರೂ ಆಗಿರುವ ಡಿ. ಮಲ್ಲಿಕಾರ್ಜುನ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಶ್ರೀ ಉಕ್ಕಡಗಾತ್ರಿ ಅಜ್ಜಯ್ಯನ ಶಿಷ್ಯೋತ್ತಮರಾದ ಶ್ರೀ ಹೇಮಜ್ಜಯ್ಯ ಅವರ ಸತ್ಸಂಕಲ್ಪದAತೆ ಲೋಕ ಕಲ್ಯಾಣಾರ್ಥವಾಗಿ ಅಂದು ರುದ್ರಾಭಿಷೇಕ, ಗಂಗೆ ಪೂಜೆ, ಡೊಳ್ಳು ಕುಣಿತ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಜರುಗಲಿದೆ.

ಪ್ರತಿವರ್ಷದಂತೆ ಈ ಬಾರಿಯೂ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಗುಗ್ಗರಹಟ್ಟಿಯ ಶ್ರೀ ರುಕ್ಮಿಣಿ ಪಾಂಡುರಂಗ ಭಜನಾ ಮಂಡಳಿ ಮತ್ತು ಸುರೇಂದ್ರ ಗುಗ್ಗರಹಟ್ಟಿ ಇವರ ತ೦ಡದಿ೦ದ ಭಕ್ತಿಗೀತೆಗಳು ಹಾಗೂ ಬಳ್ಳಾರಿ ಯಶಸ್ವಿನಿ ಕಲಾ ತಂಡದಿಂದ ಕೋಲಾಟ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

news_1787227805_2_402.webp

 



ಮುಖ್ಯ ಅತಿಥಿಗಳಾಗಿ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಬಿ.ನಾಗೇಂದ್ರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಉದ್ಯಮಿಗಳು ಹಾಗೂ ಕಾಂಗ್ರೆಸ್ ಪಕ್ಷದ ಧುರೀಣರಾದ ಟಿ.ಜಿ.ಯರಿಸ್ವಾಮಿ, ಮುಖಂಡರಾದ ಎಸ್.ವೆಂಕಟರಾವ್ (ನಾನಿ), ಭೋವಿ ಸಮಾಜದ ರಾಜ್ಯಾಧ್ಯಕ್ಷರಾದ ಬಂಡಿಹಟ್ಟಿ ಮಹೇಶ್, ಕೆಪಿಸಿಸಿ ಮುಖಂಡರಾದ ಚಂಪಾ ಚೌಹಾಣ್, ಹಲಕುಂದಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೇಕ್ಷಾವಲಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.

ಶ್ರೀ ಅಜ್ಜಯ್ಯನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಎಲ್ಲ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗುರು ಅಜ್ಜಯ್ಯ ಅವರ ಕೃಪೆಗೆ ಪಾತ್ರರಾಗುವಂತೆ  ಸಮಿತಿಯ ಪದಾಧಿಕಾರಿಗಳು, ಸರ್ವ ಸದಸ್ಯರು ಮತ್ತು ಭಕ್ತರಾದ ಆರ್. ಸಕ್ರುನಾಯ್ಕ್, ವಿ. ರಾಮುನಾಯ್ಕ್, ಪಟೇಲ ರಾಮುನಾಯ್ಕ್, ಹನ್ನಿನಾಯ್ಕ್,  ಬಂಡಿಹಟ್ಟಿ ಸ್ವಾಮಿನಾಯ್ಕ್,  ವಿ. ಸ್ವಾಮಿನಾಯ್ಕ್, ಈಚ್ಚಗೋಪಿನಾಯ್ಕ್, ಆರ್. ವೆಂಕಟೇಶ್‌ನಾಯ್ಕ್, ಜೆ.ಭೀಮೂನಾಯ್ಕ್, ಎಂ. ಕಾಕುನಾಯ್ಕ್, ಜೆ. ಸಾಮುನಾಯ್ಕ್, ಆರ್. ಶಂಕರ್‌ನಾಯ್ಕ್, ವಿ. ರೆಡ್ಡುನಾಯ್ಕ್, ಲಾಲಿಹನ್ನುನಾಯ್ಕ್, ಎಲ್. ಹನ್ನನಾಯ್ಕ್, ವಿ. ಭೀಮನಾಯ್ಕ್, ತಿರುಪತಿನಾಯ್ಕ್, ಎ. ವಸಂತ್ ನಾಯ್ಕ್, ಶಂಕರ್ ನಾಯ್ಕ್, ಎಲ್. ತುಕಾನಾಯ್ಕ್, ಹೆಚ್. ಲಕ್ಷ್ಮಣನಾಯ್ಕ್, ಆರ್. ಲೋಕುನಾಯ್ಕ್, ಆರ್. ಸುಬ್ಬನಾಯ್ಕ್, ಆರ್. ಚಂದ್ರನಾಯ್ಕ್, ಆರ್. ಭಜನಾನಾಯ್ಕ್, ಗೌವನಿನಾಯ್ಕ್, ಹನುಮಂತ ನಾಯ್ಕ್, ಬಂಡಿಹಟ್ಟಿ (ಅಜ್ಜಯ್ಯ) ಎನ್. ರಾಮುನಾಯ್ಕ್, ಜೆ. ಠಾಕೂರ್‌ನಾಯ್ಕ್, ಆರ್. ಠಾಕೂರ್‌ನಾಯ್ಕ್, ಆರ್. ಗೋಪಾಲಿನಾಯ್ಕ್, ಆರ್. ಸಕ್ಸಾನಾಯ್ಕ್,  ಗೋಟ್ಯಶಂಕರ್‌ನಾಯ್ಕ್, ಸಿಯಾಚಂದುನಾಯ್ಕ್, ಆರ್. ರಾವಣ್ಯನಾಯ್ಕ್, ಗಾದಿಗುಳ್ಳನಾಯ್ಕ್, ವಿ. ಗಾಂಗುರಾಮುನಾಯ್ಕ್, ಪೂಣಾನಾಯ್ಕ್, ವಡ್ಯರಾಮುನಾಯ್ಕ್, ನಾಗೇಂದ್ರ, ಹೆಚ್. ಕೃಷ್ಣನಾಯ್ಕ್, ಡಿ. ಕೃಷ್ಣನಾಯ್ಕ್, ಮೋತಿ ರಾಮುನಾಯ್ಕ್, ಕೇತ್ಯಾರೆಡ್ಡುನಾಯ್ಕ್, ಆಟೋ ಸ್ವಾಮಿನಾಯ್ಕ್, ಆರ್. ಹರೀಶ್‌ನಾಯ್ಕ್, ವಿ. ಮಂಜುನಾಯ್ಕ್, ಹೆಚ್. ಕೃಷ್ಣನಾಯ್ಕ್, ಎಲ್. ತುಕಾ ರವಿನಾಯ್ಕ್, ಸೇಕುನಾರಾಯಣ ನಾಯ್ಕ್, ವೆಂಕಿಸ್ವಾಮಿನಾಯ್ಕ್, ಚಟ್ಟಿ ನಾಗಭೂಷಣ, ಓಬಳೇಶ್, ವೆಂಕಟೇಶ್, ಪೂಜಾರಿ ಗಾದಿಲಿಂಗಪ್ಪ, ಮಲ್ಲಿಕಾರ್ಜುನ, ಪೊಲೀಸ್ ಗಾದಿಲಿಂಗ, ರಾಜಶೇಖರಗೌಡ, ಅಂಗಡಿ ಬಸಪ್ಪ, ಮಲ್ಲಿಕಾರ್ಜುನ ಚೆರುಕುಂಟೆ (ಅಜ್ಜಯ್ಯ) ಶ್ರೀ ಶ್ರೀಕಾಂತ ಸ್ವಾಮಿ, ಶಿವಸಿದ್ದ, ಶ್ರೀನಿವಾಸ, ರೇವಣಸಿದ್ದ, ಮಂಜು, ರವಿ, ಅಪ್ಪು, ಮಧು, ಲಿಂಗಪ್ಪ, ಕಡೂರು ಶಿವಲಿಂಗ, ಮರೇಗೌಡ, ಪವನ್, ರಘು, ಅಂಗಡಿ ರಮೇಶ್ ಅವರು ಕೋರಿದ್ದಾರೆ.

news_1787227805_1_412.webp

 


ಹೊನ್ನಳ್ಳಿ ತಾಂಡ, ಬೆಳಗಲ್ ತಾಂಡ, ಜಾನೆಕುಂಟೆ ತಾಂಡ, ತುಮಟಿ ತಾಂಡ, ಸಿದ್ದಾಪುರ ತಾಂಡದ ಸಮಸ್ತ ಎಲ್ಲಾ ನಾಯ್ಕರು, ಕಾರಿಬಾರಿ, ಡಾವ್ ಹಾಗೂ ಸುತ್ತಮುತ್ತಲಿನ ಗ್ರಾಮದ ಹಿರಿಯರು ಮತ್ತು ಮುಖಂಡರು ಗಳ ಸಮ್ಮುಖದಲ್ಲಿ ಅಂದು ಬೆಳಿಗ್ಗೆ ೧೧-೦೦ ರಿಂದ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಹಾಗೂ ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ & ಸಂಶೋಧನ ಕೇಂದ್ರ ಇವರಿಂದ ಸ್ವಯಂ ಪ್ರೇರಿತ ರಕ್ತಾದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣ ಶಿಬಿರ ಜರುಗಲಿದೆ.

ವಿಶೇಷ ಆಹ್ವಾನಿತರಾಗಿ ಸಮಿತಿಯ ಅಧ್ಯಕ್ಷರಾದ ಡಿ. ಮಲ್ಲಿಕಾರ್ಜುನ, ಪದಾಧಿಕಾರಿಗಳಾದ ಆರ್.ಟಿ. ರಾಮುನಾಯ್ಕ್, ಹೆಚ್.ಚಂದ್ರ ನಾಯ್ಕ, ಆರ್. ಪ್ರಕಾಶ್ ನಾಯ್ಕ್, ಎಂ. ಹನ್ನು ನಾಯ್ಕ, ಸದಸ್ಯರಾದ  ಸಿ.ಮಧುಸೂದನ್, ಆರ್.ವೆಂಕಟೇಶ್ ನಾಯ್ಕ್, ಎ.ಶ್ರೀನಿವಾಸ, ಆರ್.ಮಂಜು, ಆರ್.ಲಕ್ಷ್ಮಣ, ಬಿ.ಸತ್ಯನಾರಾಯಣ, ಕರಿ ಸುರೇಶ್ ಸೇರಿದಂತೆ ಶ್ರೀ ಗುರು ಅಜ್ಜಯ್ಯ ಹಾಗೂ ಹೇಮಜ್ಜಯ್ಯ ಸೇವಾ ಸಮಿತಿ (ರಿ)
ಅಜ್ಜಯ್ಯ ಸೇವಾ ಸಮಿತಿ, ಹೊನ್ನಳ್ಳಿ ತಾಂಡದ ಸಮಸ್ತರು ಉಪಸ್ಥಿತಿ ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ: ೯೧೬೪೦೯೮೧೭೧, ೯೯೦೦೫೧೬೩೯೯, ೯೩೭೯೨೬೯೧೦೮, ೯೪೮೦೯೪೭೦೮೬, ೯೭೩೧೩೪೫೬೬೪ ಸಂಪರ್ಕಿಸಬಹುದು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆಬಳ್ಳಾರಿಯಲ್ಲಿ ದಿವಂಗತ ಡಿ.ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆಬಳ್ಳಾರಿಯಲ್ಲಿ ರಾಜ್ಯ ಮಟ್ಟದ ಪರಿಷತ್ ಸಭೆ ಹಾಗೂ ನಶಾಮುಕ್ತ ಭಾರತ ಅಭಿಯಾನಕರ್ನಾಟಕ ಸೇರಿ ದಕ್ಷಿಣ ಭಾರತಕ್ಕೆ ನ್ಯಾಯಯುತ ಅನುದಾನ ನೀಡಿ: ಸಿಎಂ ಡಿ ಕೆ ಶಿವಕುಮಾರ್ ಒತ್ತಾಯಯಾರಿಗೆ ಒಲೆಯುತ್ತೆ ಬಿಜೆಪಿ ಟಿಕೆಟ್ ರಾಜೀವ್ ಗಾಂಧಿ ಹಾದಿಯಲ್ಲಿ ರಾಹುಲ್ ಗಾಂಧಿ