LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

ಗೋವಾದಲ್ಲಿ 2026ರ 5ನೇ ಬೋನಸ್ ಏಷ್ಯಾ ಕಪ್ ಬ್ರಿಡ್ಜ್ ಚಾಂಪಿಯನ್ಶಿಪ್

ಜಾಗತಿಕ ಮೈಂಡ್ ಸ್ಪೋರ್ಟ್ ಐಕಾನ್ಗಳು, ಏಷ್ಯನ್ ಗೇಮ್ಸ್ ಪದಕ ವಿಜೇತರು, ಅಂತಾರಾಷ್ಟ್ರೀಯ ಆಟಗಾರರು ಭಾಗಿ

ಬೆಂಗಳೂರು:  ಭಾರತದಲ್ಲಿ ಕಾನ್ಟ್ರಾಕ್ಟ್ ಬ್ರಿಡ್ಜ್ ಆಟದ ಶ್ರೇಷ್ಠ ಆಡಳಿತ ಸಂಸ್ಥೆಯಾಗಿರುವ ಹಾಗೂ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ ಮಾನ್ಯತೆ ಪಡೆದಿರುವ ಬ್ರಿಡ್ಜ್ ಫೆಡರೇಶನ್ ಆಫ್ ಇಂಡಿಯಾ, ಪ್ರತಿಷ್ಠಿತ 5ನೇ ಬೋನಸ್ ಏಷ್ಯಾ ಕಪ್ ಬ್ರಿಡ್ಜ್ ಚಾಂಪಿಯನ್ಶಿಪ್ ಅನ್ನು ಜೂನ್ 21ರಿಂದ 27ರವರೆಗೆ ಗೋವಾದ ತಾಜ್ ಸಿಡಾಡೆ ಡಿ ಗೋವಾ ಹೊರೈಜನ್ನಲ್ಲಿ ಆಯೋಜಿಸಿದೆ.

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಏಷ್ಯಾ ಕಪ್, ಏಷ್ಯಾ ಮತ್ತು ಓಷಿಯಾನಿಯಾದ ಪ್ರಮುಖ ರಾಷ್ಟ್ರಗಳ ಭಾಗವಹಿಸುವಿಕೆಯಿಂದ ಏಷ್ಯಾ ಬ್ರಿಡ್ಜ್ ಸಮುದಾಯದ ಆಶ್ರಯದಲ್ಲಿ ನಡೆಯುವ ಅತ್ಯಂತ ಪ್ರತಿಷ್ಠಿತ ಖಂಡ ಮಟ್ಟದ ಬ್ರಿಡ್ಜ್ ಚಾಂಪಿಯನ್ಶಿಪ್ಗಳಲ್ಲಿ ಒಂದಾಗಿದೆ.

news_1779358558_4_633.webp

 

ವರ್ಷ ಭಾರತ, ಚೀನಾ, ಜಪಾನ್, ಚೈನೀಸ್ ತೈಪೆ, ಹಾಂಗ್ ಕಾಂಗ್ ಚೈನಾ, ಸಿಂಗಾಪುರ್, ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡನ್, ಕುವೈತ್ ಮತ್ತು ಸೌದಿ ಅರೇಬಿಯಾ ಸೇರಿ 20ಕ್ಕೂ ಹೆಚ್ಚು ದೇಶಗಳಿಂದ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಬ್ರಿಡ್ಜ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಪ್ರಸಾದ್ ಕೆನಿ ಮಾತನಾಡಿ,  ಪ್ರತಿಷ್ಠಿತ ಬೋನಸ್ ಏಷ್ಯಾ ಕಪ್ ಬ್ರಿಡ್ಜ್ ಚಾಂಪಿಯನ್ಶಿಪ್ ಆಯೋಜಿಸಲು ಭಾರತಕ್ಕೆ ಇದು ಎರಡನೇ ಬಾರಿ ಸಿಕ್ಕಿರುವ ಗೌರವ. ಇದು ಜಾಗತಿಕ ಮೈಂಡ್ ಸ್ಪೋರ್ಟ್ ಹಾಗೂ ಬೌದ್ಧಿಕ ಕ್ರೀಡಾಕೂಟಗಳ ಪ್ರಮುಖ ಗಮ್ಯಸ್ಥಾನವಾಗಿ ಭಾರತದ ಬೆಳೆಯುತ್ತಿರುವ ಪ್ರತಿಷ್ಠೆಯನ್ನು ತೋರಿಸುತ್ತದೆ ಎಂದು ಹೇಳಿದರು.

ನಂತರ ವಾರಪೂರ್ತಿ ಅರ್ಹತಾ ಸುತ್ತುಗಳು, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ನಡೆಯಲಿವೆ. ಪ್ರತಿ ವಿಭಾಗಕ್ಕೆ ಕೇವಲ 16 ತಂಡಗಳಿಗೆ ಅವಕಾಶ ಇರುತ್ತದೆ. ಟೂರ್ನಿಯ ಪ್ರಮುಖ ಆಕರ್ಷಣೆಯಾಗಿ 2026 ಜೂನ್ 27ರಂದು ಎಲ್ಲಾ ನೋಂದಾಯಿತ ಆಟಗಾರರಿಗಾಗಿ ವಿಶೇಷಫ್ರೆಂಡ್ಶಿಪ್ ಪೇರ್ಸ್ ಈವೆಂಟ್ಆಯೋಜಿಸಲಾಗಿದೆ.

news_1779358557_3_832.webp

 

ಭಾರತ ಚಾಂಪಿಯನ್ಶಿಪ್ನಲ್ಲಿ ಇದುವರೆಗೆ 8 ಚಿನ್ನ ಸೇರಿದಂತೆ ಒಟ್ಟು 20 ಪದಕಗಳನ್ನು ಗೆದ್ದು ಹೆಮ್ಮೆಯ ಪರಂಪರೆಯನ್ನು ಹೊಂದಿದೆ. ಸುಭಾಷ್ ಗುಪ್ತಾಸಂದೀಪ್ ಠಾಕ್ರಾಲ್ ಹಾಗೂ ರಾಜೇಶ್ವರ್ ತಿವಾರಿಸುಮಿತ್ ಮುಖರ್ಜಿ ಮೊದಲಾದ ಭಾರತದ ಪ್ರಮುಖ ಜೋಡಿಗಳು ಬಾರಿ ಭಾರತದ ಪದಕ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಿವೆ.

ವರ್ಷದ ಚಾಂಪಿಯನ್ಶಿಪ್ ಏಷ್ಯಾ-ಪೆಸಿಫಿಕ್ ಪ್ರದೇಶದ ಅತ್ಯಂತ ಸಾಧನೆಗೈದ ಬ್ರಿಡ್ಜ್ ಆಟಗಾರರು, ರಾಷ್ಟ್ರೀಯ ಚಾಂಪಿಯನ್ಗಳು ಮತ್ತು ಅಂತರರಾಷ್ಟ್ರೀಯ ಪದಕ ವಿಜೇತರನ್ನು ಒಂದೇ ವೇದಿಕೆಗೆ ತರುತ್ತದೆ,” ಎಂದು  ಕೆನಿ ಹೇಳಿದರು.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಒಲಿಂಪಿಯಾಡ್ ಪ್ರಮಾಣ ಪತ್ರ ವಿತರಣೆಹೆಚ್ಚಿನ ಇಳುವರಿ ಮತ್ತು ದೀರ್ಘಾವಧಿ ಲಾಭಕ್ಕಾಗಿ 'ಅಂಗಾಂಶ ಕೃಷಿ ಬಾಳೆ ಬೇಸಾಯ'ಕ್ಕೆ ರೈತರು ಮುಂದಾಗಿಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿಜೀವನದಲ್ಲಿ ಆಸೆಯೂ ಬೇಕು, ಸಾಕು ಎಂಬ ಭಾವವೂ ಬೇಕುನೇರಳೆ ಗಿಡಗಳ ಮಾರಣಹೋಮ ಸರ್ಕಾರಿ ಮುದ್ರಣ ತಂತ್ರಜ್ಞಾನ ಸಂಸ್ಥೆಯಲ್ಲಿ ಸೇವಾ ನಿವೃತ್ತಿ ಹೊಂದಿದ್ದ ಡಾ. ಎಸ್. ವಿಜಯ್ ಕುಮಾರ್ ರವರಿಗೆ ಸನ್ಮಾನ ವಿಜಯನಂದ ಕಾಶಪ್ಪನವರ ಅವರಿಗೆ ಸಚಿವ ಸ್ಥಾನ ಹಾಗೂ ವೀಣಾ ಕಾಶಪ್ಪನವರ ಅವರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ ಆಗ್ರಹ ಕನಿಷ್ಠ ವೇತನ ಜಾರಿಗಾಗಿ ಸಿಐಟಿಯು ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆಬಳ್ಳಾರಿ ಪಾಲಿಕೆಯಲ್ಲಿ ಅಕ್ರಮ ಬಿ-ಖಾತೆ ವಿತರಣೆಯ ಆರೋಪಜೂನ್ 2ರಂದು ತುಂಗಭದ್ರ ಜಲಾಶಯದ ಹೂಳು ತೆರವಿಗೆ ರೈತರ ಸಾಂಕೇತಿಕ ಅಭಿಯಾನ