LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Hassan

ಸುಂದರ ಅಭಿವ್ಯಕ್ತಿ ಮಂಜುಳಾ ಅವರ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ

ಹಾಸನ: ಕಲೆಗೆ ತವರೂರಾದ ಹಾಸನದಲ್ಲಿ ಹಲವಾರು ರೀತಿಯ ಕಲೆಯನ್ನು ಬೆಳೆಸುತ್ತಾ ಪೋಷಿಸುತ್ತಾ ಬಂದಿರುವಲ್ಲಿ ಚಿತ್ರಕಲೆಯೂ  ಒಂದು. ತಮ್ಮ ವ್ಯಾಸಂಗಕ್ಕೆ ಚಿತ್ರಕಲೆಯನ್ನು ಆಯ್ಕೆ ಮಾಡಿಕೊಂಡ ಮಂಜುಳಾ ಅವರು ಹಾಸನದ ಅರಳಿಕಟ್ಟೆ ಸರ್ಕಲ್ ಬಳಿಯ ಸಂಸ್ಕೃತ ಭವನದಲ್ಲಿ ತಮ್ಮ ಕಲಾ ಸಂಸ್ಕೃತಿಯನ್ನು ಪ್ರದರ್ಶಿಸಿದರು.

news_1787021955_1_810.webp

 

ರಾಜಘಟ್ಟದ  ರಂಗೇಗೌಡ ಹನುಮಮ್ಮ ಅವರ ಮಗಳು ಮಂಜುಳಾ ಅವರಿಗೆ ಚಿತ್ರಕಲೆಯಲ್ಲಿ ಬಾಲ್ಯದಿಂದಲೂ ಆಸಕ್ತಿ.  ಪಿಯುಸಿ  ನಂತರ  ಹಾಸನದ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ 5 ವರ್ಷ ಚಿತ್ರಕಲಾ ಶಿಕ್ಷಣ ಮುಗಿಸಿ  ಕುವೆಂಪು

 ಶಾಲೆಯಲ್ಲಿ  ಚಿತ್ರಕಲಾ ಶಿಕ್ಷಕಿಯಾಗಿ ಪ್ರಥಮವಾಗಿ ಸೇರಿ ನಂತರ ಹಾಸನದ ಪ್ರತಿಷ್ಠಿತ ಶಾಲೆ ಯುರೋ ಸ್ಕೂಲ್ ನಂತರ ಹಾಸನದ ಸಗೆಶಿಯಸ್ ಇಂಟರ್ ನ್ಯಾಷನಲ್  ಶಾಲೆಯಲ್ಲಿ 10  ವರ್ಷ  ಚಿತ್ರಕಲಾ ಶಿಕ್ಷಕಿಯಾಗಿ  ಮುಂದುವರಿದಿದ್ದಾರೆ.    ಬಿಡುವಿನ ವೇಳೆ ಚಿತ್ರಕಲೆಯಲ್ಲಿ ಆಸಕ್ತಿಯುಳ್ಳ ಮಕ್ಕಳಿಗೆ ಚಿತ್ರಕಲೆ ಕಲಿಸುತ್ತಿದ್ದಾರೆ. ಈವರೆಗೆ ಹಲವಾರು ವಿದ್ಯಾರ್ಥಿಗಳು   ಇವರ ಮಾರ್ಗದರ್ಶನದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ  ಬಹುಮಾನ ಗೆದ್ದಿದ್ದಾರೆ. 

news_1787021955_2_328.webp

 

ಇವರು ಕ್ಯಾನ್ವಾಸ್ ಪೇಂಟಿಂಗ್ ಅಕ್ರಾಲಿಕ್ ಪೇಯಿಂಟ್ ಬಳಸಿ ಕಲಾಕೃತಿ ರಚಿಸುವ,  ಗಂಜಿಪ ಚಿತ್ರಗಳನ್ನು ಚಿತ್ರಿಸುವ ಕೌಶಲ್ಯ ಹೊಂದಿದ್ದಾರೆ. ಎಲ್ಲಾ ರೀತಿಯ ಪಕ್ಷಿಗಳು ಇವರ ಕುಂಚ ಕಲೆಯಲ್ಲಿ ಜೀವ ತಳೆದು ಹಾರಾಡಿವೆ. ಹೂವುಗಳು ಅರಳಿವೆ. ಹಾಗೆಂದು ಪರಿಮಳ ಬೀರುವುದೇ ಎಂದು ಕೇಳಬೇಡಿ.   ಹಲವು ಗ್ರೂಪ್ ಷೋ ಗಳಲ್ಲಿ ಭಾಗವಹಿಸಿರುವ ಮಂಜುಳಾ ಅವರು ಇಂದು ತಮ್ಮ ಏಕವ್ಯಕ್ತಿ ಕಲಾ ಪ್ರದರ್ಶನದಲ್ಲಿ ತಮ್ಮ ಕಲೆಗಾರಿಕೆಯನ್ನು ಅಭಿವ್ಯಕ್ತಿಸಿದರು.

news_1787021955_3_833.webp

 

ಅವರ ಕಲಾಕೃತಿಗಳನ್ನು ವೀಕ್ಷಿಸುತ್ತಾ, ಮಂಜುಳಾ ಮೇಡಂ, ನಿಮ್ಮ ಕಲಾಕೃತಿಗಳ ಬಗ್ಗೆ ನೀವೇ ವಿವರಿಸಿ ಎಂದೆ.  ಹೋ ಶೂರ್ ಸರ್ ಎಂದು ಒಂದೊಂದೇ ಕಲಾಕೃತಿಗಳ ಬಗ್ಗೆಯೂ ವಿವರಿಸುತ್ತಾ ಸಾಗಿದಂತೆ ನಾನು ಬರೆದುಕೊಳ್ಳುತ್ತಾ ಹಿಂಬಾಲಿಸಿದೆ.

 

- ಗೊರೂರು ಅನಂತರಾಜು,

ಹಾಸನ.

ಮೊಬೈಲ್: 9449462879

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ