ನಾಯಕನಹಟ್ಟಿ : ನಾನು ಬಿಜೆಪಿ ಅಭ್ಯರ್ಥಿಯಲ್ಲ ಹಾಗೂ ಆಕಾಂಕ್ಷಿ ನಾನಲ್ಲ ಶ್ರೀಗುರು ತಿಪ್ಪೇರುದ್ರಸ್ವಾಮಿ ಪರಮ ಭಕ್ತ ದೇವರ ದರ್ಶನಕ್ಕೆ ಬಂದಿರುವುದಾಗಿ ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಮಾಡಿದಷ್ಟು ನೀಡು ಭಿಕ್ಷೆ ಎಂಬ ವಚನ ಸಂದೇಶ ಸಾರಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ದೇವರ ದರ್ಶನ ಪಡೆದರು. ಈ ವೇಳೆ ವಾಲ್ಮೀಕಿ ವೃತ್ತದ ವಾಲ್ಮೀಕಿ ಪ್ರತಿಮೆಗೆ ಪುಷ್ಪ ಹೂವಿನ ಹಾರ ಹಾಕಿದರು.
ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಚಿವರ ಶ್ರೀರಾಮುಲುರವರು ಸ್ಪರ್ಧಿಸಿದಂತ ಕ್ಷೇತ್ರ, ಈ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಅಭಿವೃದ್ಧಿ ಕೆಲಸಗಳನ್ನು ನೋಡಿ ಸಂತಸ ತಂದಿದೆ. 2028ರ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿಸಬೇಕು ಎಂಬುವುದೆ ನನ್ನ ಉದ್ದೇಶ ಎಂದು ಹೇಳಿದರು. ನಾನು ಪಕ್ಷ ಸಂಘಟನೆ ಮಾಡುವುದೆ ನನ್ನ ಮುಂದಿನ ಗುರಿ ಎಂದು ಸ್ಪಷ್ಪನೆ ನೀಡಿದರು.
ಈ ಸಂದರ್ಭದಲ್ಲಿ ಪಾಪೇಶ್ನಾಯಕ, ತಾರಕೇಶ್, ಶಿವದತ್ತ, ಪಾಲಯ್ಯ, ನಾಗರಾಜ್, ಪರಮೇಶ್ವರಪ್ಪ, ದಾಸರಮುತ್ತೇನಹಳ್ಳಿ ಓಬಯ್ಯ, ಮನ್ನೆಕೋಟೆ ರವಿ, ಗೌಡಗೆರೆ ರಾಜು, ಶಂಕರಮೂರ್ತಿ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಮಹಂತಣ್ಣ, ಓಬಣ್ಣ, ನಾಗರಾಜ್, ರೇವಣ್ಣ, ವಿಜಯ್ಕುಮಾರ್, ಬೋರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಓ.ಮಂಜುನಾಥ, ತಿಪ್ಪೇಸ್ವಾಮಿ, ತ್ರಿಶೂಲ್ ಕುಮಾರ್, ಬಿ.ಟಿ.ತಿಪ್ಪೇಸ್ವಾಮಿ, ತೊರೆಕೋಲಮ್ಮನಹಳ್ಳಿ ಜೆ.ಸಿ.ಬಿ ತಿಪ್ಪಣ್ಣ, ಹುಚ್ಚಮಲ್ಲಯ್ಯ, ಬೂಟ್ ತಿಪ್ಪೇಸ್ವಾಮಿ, ಮಧು ದ್ವಂಸ, ಹೆಚ್.ವಿ.ಪ್ರಕಾಶ್ ರೆಡ್ಡಿ, ಭೀಮಣ್ಣ, ಮಲ್ಲಿಕಾರ್ಜುನ, ನಿರಂಜನ್, ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.