LIVE TV StateNationalPoliticsInternationalCrimeEntertainmentSportsEducationFINANCE & TAXATION
Districts Bellary | Districts Koppal | Politics News

ದಲಿತರನ್ನು ತುಳಿಯುವುದೇ ಬಿಜೆಪಿಗರ ಕೆಲಸ: ಸಚಿವ ನಾಗೇಂದ್ರ

ನಾನು ಆರೋಪಿ ಅಷ್ಟೇ. ಅಪರಾಧಿ ಅಲ್ಲ - ನಾನು ಪೆಟ್ಟುತಿಂದ ಹುಲಿ ಮುಂದೆ ನೋಡಿ ನನ್ನ ಕೆಲಸ : ನಾಗೇಂದ್ರ

 

ಕೊಪ್ಪಳ : ಬಿಜೆಪಿಗರಿಗೆ ದಲಿತರನ್ನು ಕಂಡರೆ ಹಾಗೇ ಆಗೋದು. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಮುಂದೆ ಬಂದರೆ ಅವರಿಗೆ ಸಹಿಸಲು ಆಗೋದಿಲ್ಲ, ಅದು ಅವರಿಗೆ ರೂಢಿಗತವಾಗಿ ಬಂದಿದೆ ಎಂದು ಸಚಿವ ನಾಗೇಂದ್ರ ಹೇಳಿದರು

 

ತಾಲೂಕಿನ ಮುನಿರಾಬಾದ್ ನ ಕಾಡಾ ಕಚೇರಿ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತ್ನಾಡಿ, ದಲಿತರನ್ನು ತುಳಿಯಬೇಕು. ಅವರು ಮೇಲೆ ಬರಬಾರದು ಎಂಬುದು ಬಿಜೆಪಿಗರ ಉದ್ದೇಶ. ಅವರು ಸದನದಲ್ಲಿ ಹೋರಾಡಲಿ. ನಾನು, ನಮ್ಮ ಸಿಎಂ ದಿಟ್ಟ ಉತ್ತರ ಕೊಡಲು ಸಿದ್ಧ ಎಂದರು.

 

 

ಈಗಾಗಲೇ ನನ್ನ ವಿಷಯದಲ್ಲಿ ಸಿಎಂ ಹಲವು ಬಾರಿ ಉತ್ತರ ಕೊಟ್ಟಿದ್ದಾರೆ. ಹೋರಾಟ ಮಾಡುವುದು ವಿರೋಧ ಪಕ್ಷದ ನಾಯಕರ ಕರ್ತವ್ಯ, ನಾವೂ ಅದಕ್ಕೆ ರೆಡಿ ಇದ್ದೇವೆ. ಆರೋಪ ಮಾಡುವುದು, ಇಕ್ಕಟ್ಟಿಗೆ ಸಿಲುಕಿಸುವುದು ಹಿಂದಿನಿಂದಲೂ ನಡೆದಿದೆ ಎಂದರು.

 

ನಮ್ಮ ಸಿಎಂ, ಸಂಪುಟ ನಾಯಕರೆಲ್ಲರೂ ತಕ್ಕ ಉತ್ತರ ಕೊಡುತ್ತಾರೆ. ಬಳ್ಳಾರಿಯಲ್ಲಿ ನಮ್ಮ ಸಿದ್ಧಾಂತ ಇಟ್ಟುಕೊಂಡು ಹೋರಾಟ ಮಾಡ್ತಾ ಇದೀವಿ, ಅಲ್ಪಸಂಖ್ಯಾತ, ದಲಿತ, ಹಿಂದುಳಿದವರನ್ನು ಒಗ್ಗೂಡಿಸಿಕೊಂಡು ಹೋಗುತ್ತೇವೆ. ದೇಶದಾದ್ಯಂತ ಇದೇ ರೀತಿಯಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ ಎಂದರು

 

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದುರುಪಯೋಗ ಆದ ಹಣ ಮರಳಿ ಪಡೆದಿದ್ದೇವೆ, ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ. ನಾನೂ ಇದರ ವಿರುದ್ದ ಹೋರಾಟ ಮಾಡುತ್ತಿರುವೆ. ಎಲ್ಲಿ ಹೋದ್ರು ನಾನು ಅನುಮತಿ ಪಡೆದೇ ಹೋಗುತ್ತೇನೆ ಅದು ದೆಹಲಿ, ಮತ್ತೊಂದು ಕಡೆ ಹೋಗುತ್ತೇನೆ. ನಾನು ಆರೋಪಿ ಅಷ್ಟೇ. ಅಪರಾಧಿ ಅಲ್ಲ ಎಂದರು.

 

ನ್ಯಾಯಾಲಯ ದೇವರ ಮೇಲೆ ನನಗೆ ನಂಬಿಕೆ ಇದೆ.ಬಸಚಿವರ ಬದಲಾವಣೆ ಮಾಡುವ ವಿಷಯ ನನಗೆ ಗೊತ್ತಿಲ್ಲ. ಈಗಾಗಲೇ ನಾನು ಪೆಟ್ಟು ತಿಂದ ಹುಲಿ, ಮುಂದೆ ನೋಡಿ ನನ್ನ ಕೆಲಸ ಹೇಗಿರುತ್ತೆ ಎಂದು,

ಹೀಗಾಗಿ ಯಾವುದೇ ಖಾತೆ ಕೊಟ್ಟರೂ ಸರಿಯಾಗಿ ನಿಭಾಯಿಸುವೆ. ಸಿಎಂ, ಮಾಜಿ ಸಿಎಂ, ಹೈಕಮಾಂಡ್ ಸೂಚಿಸುವ ಖಾತೆ ಪಡೆಯುವೆ ಎಂದರು.

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
“ಅಮೋಘ” ಚಲನಚಿತ್ರದ ಹಾಡು ಬಿಡುಗಡೆಬಳ್ಳಾರಿ ಜಿಲ್ಲೆಯ ಎಸ್ಐಆರ್ ಕರಡು ಮತದಾರರ ಪಟ್ಟಿ ಪ್ರಕಟನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳ ದರ್ಶನ ಪಡೆದ ಮಾಜಿ ಶಾಸಕ ಸುರೇಶ್ ಬಾಬುಅಂಬೇಡ್ಕರ್ ಕೇವಲ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ: ಪ್ರೊ. ಎನ್.ಎಂ. ಸಾಲಿಸಾಂಸಾರಿಕ ಜೀವನ ಪ್ರವೇಶಿಸಿದ ಸ್ಪೈಡರ್ ಮ್ಯಾನ್ನಾಗೇಂದ್ರಗೆ ಮತ್ತೊಂದು ಮಹತ್ವದ ಹೊಣೆ: ಕಲ್ಯಾಣ ಕರ್ನಾಟಕ ಸಚಿವಾಲಯದ ಜವಾಬ್ದಾರಿಸಂಸ್ಕೃತ ವಿಶ್ವವ್ಯಾಪಿ ಜ್ಞಾನಭಾಷೆ, ಸಂಶೋಧನೆಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಲಿಕಲ್ಲೂರು- ಶಿಶು ಪಾಲನಾ ಕೇಂದ್ರದಲ್ಲಿ ತಾಯಂದಿರಿಗೆ ಜಾಗೃತಿ. ಹೊನ್ನಳ್ಳಿ ತಾಂಡಾದಲ್ಲಿ ಶ್ರೀಗುರು ಅಜ್ಜಯ್ಯನ ದ್ವಿತೀಯ ದಶಮಾನೋತ್ಸವ ವಿಶೇಷ ಪೂಜಾ ಕಾರ್ಯಕ್ರಮಎರಡು ದಿನಗಳ ಪುನಶ್ಚೇತನ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ