LIVE TV LocalStateNationalPoliticsEntertainmentSportsFINANCE & TAXATION EducationCrimeArticlesTechnology

"ಕುಡುಕ ನನ್ಮಕ್ಳು" ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ಬೆಂಗಳೂರು: ಕಲಾಭೂಮಿ ಕಂಬೈನ್ಸ್ ಅಡಿಯಲ್ಲಿ ಆಸ್ಕರ್ ಕೃಷ್ಣ ನಿರ್ದೇಶಿಸುತ್ತಿರುವ "ಕುಡುಕ ನನ್ಮಕ್ಳು" ಚಿತ್ರದ ಮೊದಲನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 

news_1783617609_4_980.webp

 

  ತುಂಬಾ ಒಳ್ಳೆಯವರುಅಡಿ ಬರಹ ಹೊಂದಿರುವ ಚಿತ್ರವು  ಬೆಂಗಳೂರು ನಗರ ಹಾಗೂ  ಹೊರ ವಲಯಗಳಲ್ಲಿ ಸುಮಾರು ಇಪ್ಪತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಿದ ಚಿತ್ರತಂಡ ಈಗ ಎರಡನೇ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಚಿತ್ರದಲ್ಲಿ ಕಾಮಿಡಿ ಕಿಲಾಡಿಗಳಾದ ಚಂದ್ರಪ್ರಭ, ವಿನೋದ್ ಗೊಬ್ರಗಾಲ, ಮಿಮಿಕ್ರಿ ಗೋಪಿ, ಸಚಿನ್ ಪುರೋಹಿತ್, ಚೈತ್ರಾ ಕೊಟ್ಟೂರು ಸೇರಿದಂತೆ ಹಾಸ್ಯ ಕಲಾವಿದರ ದಂಡೇ ಇದೆ.

news_1783617609_5_779.webp

 

  ಚಿತ್ರದಲ್ಲಿ ಎರಡು ಹಾಡುಗಳಿದ್ದು  ಸಾಹಿತ್ಯ ಮತ್ತು ಸಂಗೀತ ಮಂಜು ಕವಿ ಅವರದಿದೆ. ವಿನಯ್ ಗೌಡ ಛಾಯಾಗ್ರಹಣ, ಅಯುರ್ ಸಂಕಲನ, ಹಲವಾರು ರಿಯಾಲಿಟಿ ಶೋಗಳಿಗೆ ಹಾಸ್ಯ ಸಾಹಿತ್ಯವನ್ನೊದಗಿಸಿದ ವೆಂಕಟ್ರವರ ಸಂಭಾಷಣೆ, ಪಿ.ಆರ್ ಚಂದ್ರಶೇಖರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಆಗಿದ್ದಾರೆ. ಅರುಣ ಎಲ್ ಶೆಟ್ಟಿ, ವೈಶಾಲಿ ಮುರಳೀಧರ್, ಪಲ್ಲವಿ ಅಗ್ನಿಹೋತ್ರಿ, ಬಾಬು ಎಸ್. ಹೆಚ್(ತುಮಕೂರು), ರವಿ ನಾಯಕ್, ನಿಂಗರಾಜು.ಬಿ, ಲೋಕೇಶ್ ಕೆ.ಎಸ್ ಮತ್ತು ಸಿದ್ದಲಿಂಗಯ್ಯ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. 25,30,35,40 ವರ್ಷದ ನಾಲ್ವರು ವ್ಯಕ್ತಿಗಳ ಬದುಕಿನ ಮೂಲಕ ಕುಡಿತದ ಪರಿಣಾಮ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಮನರಂಜನೆಯ ಮೂಲಕ ತೋರಿಸಲಾಗುತ್ತಿದ್ದು ಅರ್ಥಪೂರ್ಣ ಸಂದೇಶವೂ ಚಿತ್ರದಲ್ಲಿದೆ ಎಂದು ನಿರ್ದೇಶಕ ಆಸ್ಕರ ಕೃಷ್ಣ ತಿಳಿಸಿದ್ದಾರೆ. ದಸರಾ ಅಥವಾ ದೀಪಾವಳಿಗೆ ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ.

Author
Rakesh V
is Digital online news channel, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST