LIVE TV StateNationalPoliticsCrimeEntertainmentSportsEducationFINANCE & TAXATION
Districts Chitradurga

ವಕ್ಫ್ ಬೋರ್ಡ್ ಅಕ್ರಮ ಸರಿಪಡಿಸಲು ಒಂದಾಗಿ

ಸದಾ-ಎ-ಇತ್ತೆಹಾದ್ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಅಲಿ ಜನಾಬ್‌ ಮುಜಾಹಿದ್ ಅಲಿ ಬಾಬ ಕರೆ 

ಚಿತ್ರದುರ್ಗ :

ವಕ್ಫ್ ಬೋರ್ಡ್ನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನ್ಯಾಯ ಗಳನ್ನು ಸರಿಪಡಿಸಬೇಕಾದರೆ ಮೊದಲು ಎಲ್ಲರೂ ಒಂದಾಗಬೇಕೆಂದು ಸದಾ-ಎ-ಇತ್ತೆಹಾದ್ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷರಾದ ಅಲಿ ಜನಾಬ್ ಮುಜಾಹಿದ್ ಅಲಿ ಬಾಬ ಕರೆ ನೀಡಿದರು.

ಪ್ರವಾಸಿ ಮಂದಿರದಲ್ಲಿ  ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 

ಜಿಲ್ಲಾ ಶಾಖೆ ಸ್ಥಾಪಿಸುವ ಹಾಗೂ ಜಿಲ್ಲಾ ವಕ್ಸ್ ಬೋರ್ಡ್ ವ್ಯಾಪಿಗೆ ಒಳಪಡುವ ಸಂಸ್ಥೆಗಳಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸ ಬೇಕಾಗಿದೆ. ಹದಿನಾರು ವರ್ಷಗಳ ಹಳೆ ಸಂಘಟನೆ ನಮ್ಮದು. ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶ, ಒಳ ಪಂಗಡಗಳನ್ನು ಮರೆತು ಎಲ್ಲರೂ ಒಂದಾ ಗುವತನಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಶಿಯಾ, ಸುನ್ನಿ ಅಂತ ಒಡಕು ಮೂಡಿಸಿ ರಾಜಕೀಯವಾಗಿ ನಮ್ಮನ್ನ ಆಟ ಆಡಿಸುತ್ತಿದ್ದಾರೆ. ಇದರ ವಿರುದ್ಧ ಮುಸಲ್ಮಾನರು ಎಚ್ಚೆತ್ತು ಕೊಳ್ಳಬೇಕೆಂದು ಮನವಿ ಮಾಡಿದರು.

 

2ಬಿ ಮೀಸಲಾತಿಯನ್ನು ತೆಗೆದು ಹಾಕಿದ್ದಲ್ಲದೆ ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದು ಬಿಜೆಪಿ, ಸಚಿವ ಜಮೀ‌ಅಹಮದ್ ಸಿದ್ದರಾಮಯ್ಯನವರ ಜೊತೆಯಲ್ಲಿ ಮುಸಲ್ಮಾನರನ್ನು ವಿಭಜಿಸಿ ಕತಮ್ ಮಾಡಲು ಹೊರಟಿದ್ದಾರೆ. ಯು.ಟಿ.ಖಾದರ್‌ಜೊತೆ ಸೇರಿ ಕೊಂಡಿರುವ ಜಿಲಾನಿ ಮುರಾಶಿಯನ್ನು ಮೊದಲು ತೆಗೆದು ಹಾಕ ಬೇಕು. ವಕ್ಸ್ ಮಂಡಳಿಗೆ ಕಮಿಟಿ ಮಾಡಿದಾಗ ಮಾತ್ರ ನಿಮಗೆಲ್ಲಾ ತಾಕತ್ತು ಬರುತ್ತದೆ. ಅಲ್ಲಿಯವರೆಗೂ ಮುಸಲ್ಮಾನರು ಅನ್ಯಾಯ ಅಕ್ರಮವನ್ನು ಖಂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

 

ಸೈಯದ್ ಇಸ್ಮಾಯಿಲ್ ಮಾತನಾಡಿ, 2ಬಿ ಮೀಸಲಾತಿಯನ್ನು ತೆಗೆದು ಹಾಕಿ ಬಿಜೆಪಿ ಸರ್ಕಾರ ಮುಸ್ಲಿಂರಿಗೆ ಘನ ಘೋರ ಅನ್ಯಾಯವೆಸಗಿದೆ. ಮತ್ತೆ 2ಬಿ ಗಾಗಿ ಹೋರಾಟ ನಡೆಸಬೇಕಿದೆ. ಇಲ್ಲವಾದಲ್ಲಿ ಮುಸಲ್ಮಾನರು ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಗಮನ ಹರಿಸಿ ಎಂದು ಮುಜಾಹಿದ್ ಅಲಿಬಾಬರವರಲ್ಲಿ ಮನವಿ ಮಾಡಿದರು.

 

ಸೈಯದ್ ಅಫಾಖ್ ಅಹಮದ್ ಮಾತನಾಡಿ, ಒಂದು ವರ್ಷದಿಂದ ಜಿಲ್ಲಾ ವಕ್ ಬೋರ್ಡ್ ಛೇರ್ಮನ್ ಹುದ್ದೆ ಖಾಲಿಯಿದೆ. ವಕ್ಸ್ ಮಂಡಳೆಯಿಂದ ಬರುವ ಆದಾಯದಲ್ಲಿ ಶೇ.30 ರಷ್ಟು ಹಣವನ್ನು ಬಡವರು, ವಿಧವೆಯರು ಹಾಗೂ ಬಡ ಮಕ್ಕಳ ನೆರವಿಗೆ ಉಪಯೋಗಿಸಬೇಕು. ವಕ್ ಬೋರ್ಡ್‌ನಲ್ಲಿ ಸಾಕಷ್ಟು ಸಮಸ್ಯೆ ಗಳಿವೆ. ಎಲ್ಲವೂ ಬಗೆಹರಿಯಬೇಕಾಗಿರುವುದರಿಂದ ಸಚಿವ ಯು.ಟಿ.ಖಾದರ್‌ಜೊತೆ ಚರ್ಚಿಸುವಂತೆ ಮುಜಾಹಿದ್ ಅಲಿಬಾಬರವರಲ್ಲಿ ವಿನಂತಿಸಿದರು.

 

ಟಿ.ಶಫಿವುಲ್ಲಾ ಮಾತನಾಡಿ, ಭಾರತದ ಎಲ್ಲಾ ಕಡೆಮುಸ್ಲಿಂರಿದ್ದಾರೆ. ರಾಜಕೀಯವಾಗಿ ಚಿಂತನೆ ಮಾಡಿದಾಗ ಅಸ್ತಿತ್ವ ಉಳಿಯುತ್ತದೆ. ಮುಸ್ಲಿಂರ ಸ್ಥಿತಿಗತಿ ಬಗ್ಗೆ ಚರ್ಚೆಯಾಗುತ್ತಿಲ್ಲ. ವಕ್ಸ್ ಬೋರ್ಡ್‌ನಲ್ಲಿ ಸಾಲು ಸಾಲು ಸಮಸ್ಯೆಗಳಿದೆ. ಅವುಗಳನ್ನು ಮೊದಲು ಬಗೆಹರಿಸಿ ಎಂದು ಸಭೆಯ ಗಮನಕ್ಕೆ ತಂದರು.

 

ಈ ಸಂದರ್ಭದಲ್ಲಿ ಎಚ್.ಪ್ಯಾರೆಜಾನ್, ಸಂಘಟನೆಯ ಅಧ್ಯಕ್ಷ ಅಲಿವುಲ್ ಹುಸೇನಿಸಾಬ್, ಎಸ್.ಆರ್.ಇ.ಹತಾವುಲ್ಲಾ, ಜಬಿ, ಮನ್ಸೂರ್, ಎ.ಜಾರ್ಕೀಹುಸೇನ್, ಸೈಯದ್ ಮೊಹಿದ್ದೀನ್, ಇನ್ನು ಅನೇಕ ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು

Rakesh V
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆ ಬಾಗಿಲಲ್ಲೇ ಜನರ ಸಮಸ್ಯೆ ಆಲಿಕೆಗೆ 'ಪ್ರಜಾಸೇವೆ': ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿಬಳ್ಳಾರಿಯಲ್ಲಿ ಮೂರನೇ ಮೆಗಾ ಲೋಕ ಅದಾಲತ್: 35,679 ಪ್ರಕರಣಗಳು ಬಾಕಿಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರಹಾವು ಕಡಿತದಿಂದ ಸಾವು-ನೋವು ತಪ್ಪಿಸಲು ತಕ್ಷಣ ಆಸ್ಪತ್ರೆಗೆ ದಾಖಲಾಗಿ: ಡಾ. ಮರಿಯಂಬಿ ವಿ.ಕೆ ಕರೆಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರಪೋತಲಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟಕ್ಕೆ ಆಯ್ಕೆ.ಪ್ರಜಾಸೇವೆ ಅಭಿಯಾನಕ್ಕೆ ಶಾಸಕ ಎನ್.ವೈ.ಗೋಪಾಲಕೃಷ್ಣ ಚಾಲನೆಆರೋಗ್ಯಕರ ಜೀವನಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು-ಡಾ. ನಿಗ್ಗುಡಗಿವಿಜಯರಾಘವೆಂದ್ರ ಅಭಿನಯದ “ರುದ್ರಾಭಿಷೇಕಂ’ ಚಿತ್ರದ ಟ್ರೈಲರ್ ಬಿಡುಗಡೆ ಪಠ್ಯದ ಜೊತೆಗೆ ಮೌಲ್ಯವರ್ಧಿತ ಕೋರ್ಸಗಳ ಆಯ್ಕೆ ಬಹುಮುಖ್ಯ-ಯಡ್ರಾಮಿ