ಬೆಂಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಬುದ್ಧನ ಕರುಣೆ, ಸಮಾನತೆ, ಅಹಿಂಸೆ ಮತ್ತು ಸಹೋದರತ್ವದ ತತ್ವಗಳನ್ನು ವಿದ್ಯಾರ್ಥಿ ಸಮುದಾಯದಲ್ಲಿ ಪಸರಿಸಬೇಕಾದ ಅವಶ್ಯಕತೆ ಇದೆ ಎಂದು ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಎಂಸಿಎ ವಿಭಾಗದ ಮುಖ್ಯಸ್ಥ ಪ್ರೊ. ಮುರಳೀಧರ ಬಿ.ಎಲ್ ತಿಳಿಸಿದರು.
ನಗರದ ಬೆಂಗಳೂರು ವಿಶ್ವವಿದ್ಯಾಲಯದ ಪಿಜಿ -2 ಪುರುಷ ವಸತಿ ನಿಲಯದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ 75ನೇ ಜನ್ಮದಿನ ಅಂಗವಾಗಿ ಬುದ್ಧನ ವಿಗ್ರಹ ವಿತರಣೆ, ವಿಶೇಷ ಆಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಧುನಿಕ ಕಾಲಘಟ್ಟದಲ್ಲಿ ಬುದ್ಧನ ತತ್ವಗಳನ್ನು ವಿದ್ಯಾರ್ಥಿಗಳಿಗೆ ಅರ್ಥೈಸಬೇಕಾಗಿದೆ. ಈ ಮೂಲಕ ವಿಶ್ವ ಶಾಂತಿಯ ಸಂದೇಶವನ್ನು ಸಾರುವುದು ಸಹ ಬಹುಮುಖ್ಯವಾಗುತ್ತದೆ ಎಂದರು.
ವಸತಿ ನಿಲಯಗಳಲ್ಲಿ ವಾಸಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ಬುದ್ಧನ ವಿಗ್ರಹಗಳ ಮೂಲಕ ಸಾಮಾಜಿಕ ನ್ಯಾಯ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶ ತಲುಪಿಸುವ ಗುರಿ ಹೊಂದಿದೆ ಎಂದು ಹೇಳಿದರು.
ಈ ವಿಗ್ರಹ ವಿತರಣಾ ಕಾರ್ಯಕ್ರಮವು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಮೈಸೂರು, ಕೋಲಾರ, ಮಂಡ್ಯ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ರಾಮನಗರ ಸೇರಿದಂತೆ ಇತರೆ ಜಿಲ್ಲೆಗಳ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ನಡೆಯಿತು. ಆಯಾ ವಸತಿ ನಿಲಯಗಳ ವಾರ್ಡನ್/ಮೇಲ್ವಿಚಾರಕರು ಹಾಗೂ ಸ್ಥಳೀಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಾವಿರಾರು ಡಾ. ಜಿ. ಪರಮೇಶ್ವರ್ ರವರ ಅಭಿಮಾನಿಗಳ ಹಾಜರಿದ್ದರು.
ಕೊನೆಯದಾಗಿ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪಸರಿಸುವಲ್ಲಿ ಮಾನ್ಯ ಶಾಸಕ ಶ್ರೀ ಪ್ರಸಾದ ಅಬ್ಬಯ್ಯ, ಕೆಪಿಎಸ್ಸಿ ಸದಸ್ಯ ಪ್ರೊ. ಆರ್. ಕಾವಲಮ್ಮ, ಬೆಂವಿವಿಯ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಮುರಳೀಧರ ಬಿ.ಎಲ್, ಶ್ರೀಮತಿ ಕೋಮಲ ಎಲ್ ಇವರುಗಳು ಜವಾಬ್ದಾರಿ ತಗೊಂಡಿದ್ದು ವಿಶೇಷವಾಗಿದೆ.
ಇದೇ ವೇಳೆಯಲ್ಲಿ ಬೆಂಗಳೂರು ವಿವಿಯ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಎಂಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ. ಮುರುಳಿಧರ್ ಬಿ.ಎಲ್, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣಮೂರ್ತಿ ಜಿ, ಪ್ರದಾನ ಕ್ಷೇಮಪಾಲಕ ಡಾ. ಡಿ.ಕೆ. ಪ್ರಭಾಕರ್, ವಸತಿ ನಿಲಯದ ಸಿಬ್ಬಂದಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತಿತರರು ಇದ್ದರು.
ಡಾ. ಜಿ. ಪರಮೇಶ್ವರ್ ಅವರ 75ನೇ ಜನ್ಮದಿನದ ಆಚರಣೆಯ ಅಂಗವಾಗಿ ’ಅಂಬೇಡ್ಕರ್ ವಾದಿಗಳ ನಡೆ ಬುದ್ಧನ ಕಡೆ’ ಎಂಬ ವಿಶೇಷ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪಸರಿಸುವಲ್ಲಿ ಮಾನ್ಯ ಶಾಸಕ ಶ್ರೀ ಪ್ರಸಾದ ಅಬ್ಬಯ್ಯ, ಕೆಪಿಎಸ್ಸಿ ಸದಸ್ಯ ಪ್ರೊ. ಆರ್. ಕಾವಲಮ್ಮ, ಬೆಂವಿವಿಯ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ. ಮುರಳೀಧರ ಬಿ.ಎಲ್, ಶ್ರೀಮತಿ ಕೋಮಲ ಎಲ್ ಇವರುಗಳು ಜವಾಬ್ದಾರಿ ತಗೊಂಡಿದ್ದು ವಿಶೇಷ.
ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ಬುದ್ಧನ ಕರುಣೆ, ಸಮಾನತೆ, ಅಹಿಂಸೆ ಮತ್ತು ಸಹೋದರತ್ವದ ತತ್ವಗಳನ್ನು ವಸತಿ ನಿಲಯಗಳಲ್ಲಿ ವಾಸಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ಬುದ್ಧನ ವಿಗ್ರಹಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯ, ವೈಚಾರಿಕತೆ ಮತ್ತು ಮಾನವೀಯ ಮೌಲ್ಯಗಳ ಸಂದೇಶವಾಗಿದೆ.
- ಪ್ರೊ. ಕೃಷ್ಣಮೂರ್ತಿ ಜಿ, ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು