ನಾಯಕನಹಟ್ಟಿ : ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಮಹನೀಯರ ಸ್ಮರಣೆ ಅಗತ್ಯ ಎಂದು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ಹೇಳಿದರು.
ಪಟ್ಟಣದ ಸರ್ಕಾರಿ ಉರ್ದು-ಇಂಗ್ಲೀಷ್ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮೌಲಾನ ಆಜಾದ ಶಾಲೆಯವರು 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ದೇಶಕ್ಕೆ ಸ್ವಾತಂತ್ರ ತಂದು ಕೊಡಲು ಹಲವಾರು ಜನರು ಹೋರಾಟ ಮಾಡಿ ತಮ್ಮ ಪ್ರಾಣ ತ್ಯಾಗಮಾಡಿ ದೇಶಕ್ಕೆ ಸ್ವಾತಂತ್ರöವನ್ನು ತಂದುಕೊಟ್ಟಿದ್ದಾರೆ. 1947ರ ಭಾರತ ದೇಶವು ಆಗಸ್ಟ್ 15ರಂದು ಸ್ವಾತಂತ್ರ್ಯವನ್ನು ಗಳಿಸಿತು. ಭಾರತದಲ್ಲಿ ಬ್ರಿಟೀಷರ ಆಳ್ವಿಕೆ ಭಾರತಕ್ಕೆ ಯೂರೋಪಿನ ವ್ಯಾಪಾರಿಗಳು ಬಂದ ನಂತರ ನಿಧಾನವಾಗಿ ಬ್ರಿಟೀಷರ ಪ್ರಭಾವ ಹೆಚ್ಚಾಯಿತು. ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟೀಷರು ಭಾರತದ ವಿವಿಧ ಪ್ರದೇಶಗಳಲ್ಲಿ ತಮ್ಮ ಅಧಿಕಾರವನ್ನು ವಿಸ್ತರಿಸಿಕೊಂಡರು ಎಂದರು. ಬ್ರಿಟೀಷರ ಗುಲಾಮತ್ವದಿಂದ ಇಡೀ ಭಾರತದ ಜನತೆಯನ್ನು ಮುಕ್ತಗೊಳಿಸಲು ದೇಶದ ಎಲ್ಲಾ ಜಾತಿ, ಧರ್ಮದ ಜನರು ತಮ್ಮ ತನು, ಮನ, ಧನವನ್ನು ಮತ್ತು ಪ್ರಾಣವನ್ನೂ ಸಹ ಮುಡಿಪಾಗಿಟ್ಟು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಅಂತಹ ಮಹನೀಯರನ್ನು ನಾವು ಈ ದಿನ ನೆನಪಿಸುತ್ತಾ ದೇಶದ ಸೇವೆಗಾಗಿ ಒಗ್ಗಟ್ಟಾಗಿ ದುಡಿಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಉರ್ದು ಶಾಲಾ ಶಿಕ್ಷಕ, ಶಿಕ್ಷಕಿಯರು , ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಪೋಷಕರು ಮೌಲಾನಾ ಆಜಾದ್ ಶಾಲೆಯ ಶಿಕ್ಷಕವೃಂದದವರು ಹಾಗೂ ವಿದ್ಯಾರ್ಥಿಗಳು ಇದ್ದರು.