ನಾಯಕನಹಟ್ಟಿ : ರಾಜ್ಯದಲ್ಲಿ ಮುಂಬರುವ 2028ರಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯದಲ್ಲಿಮುಖ್ಯಮಂತ್ರಿ ಆಗುವುದು ಖಚಿತ ನಾನು ರಾಜ್ಯದ ಮಂತ್ರಿ ಆಗುವುದು ನಿಶ್ಚಿತ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಪ್ರಬಲ ಅಭ್ಯರ್ಥಿ ಟಿ ವೀರಭದ್ರಪ್ಪ ಹೇಳಿದರು.
ಪಟ್ಟಣದಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿ ಹಾಗೂ ವಾಲ್ಮೀಕಿ ವೃತ್ತಕ್ಕೆ ಪುಷ್ಪ ಹೂವಿನ ಹಾರ ಹಾಕುವುದರ ಮೂಲಕ, ನಂತರ ಮಾತನಾಡಿದವರು 2028 ರಲ್ಲಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಖಚಿತ ಹಾಗೂ ನಾನು ಮಂತ್ರಿ ಆಗುವುದು ನಿಶ್ಚಿತ ವಿಶ್ವಾಸ ವ್ಯಕ್ತಪಡಿಸಿದರು
ರಾಜ್ಯದ ಕಾಂಗ್ರೆಸ್ ಆಡಳಿತವನ್ನು ನೋಡಿ ರಾಜ್ಯ ಮತದಾರರು ಬೇಸತ್ತಿದ್ದಾರೆ ಆದ್ದರಿಂದ ಈ ಬಾರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲಿಕ್ಕೆ ಹೊರಟಿದ್ದಾರೆ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ 150 ಸೀಟು ಗೆಲ್ಲುವುದು ಗ್ಯಾರಂಟಿ ಅಂದರು
ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು ರಾಜ್ಯದಲ್ಲಿನ ಕರ್ನಾಟಕ ಸರ್ಕಾರ ದಿವಾಳಿಯಾಗಿದ್ದು ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು
ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತ ಪರ ಕಾಳಜಿಯಿಂದ 25000 ಕೋಟಿ ರೈತರ ಸಾಲ ಮನ್ನಾ ಮಾಡಿದ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಲಾಟರಿ ಹಾಗೂ ಸಾ ರಾಯಿ ನಿಷೇಧ ಮಾಡುವ ಮೂಲಕ ಬಡ ಮತ್ತು ಸಾಮಾನ್ಯ ವರ್ಗದ ಕುಟುಂಬಗಳಿಗೆ ನೆಮ್ಮದಿಯನ್ನು ಕೊಟ್ಟಿದ್ದಾರೆ ಎಂದು ಹೇಳಿದರು.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಬರಗಾಲ ಆವರಿಸಿದೆ ಶೇಕಡ 90ರಷ್ಟು ಮಳೆ ಇಲ್ಲದೆ ಬೆಳೆಗಳು ಒಣಗಿಹೋಗಿವೆರೈತರು ಕಂಗಲಾಗಿದ್ದಾರೆ
ರಾಜ್ಯ ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿದರು. ಜಾನುವಾರುಗಳಿಗೆ ಮೇವು ಇಲ್ಲದೆ ಪರದಾಡುತ್ತಿದ್ದು ಗೋಶಾಲೆಗಳು ತೆರೆಯಬೇಕು ಧನ ಕಾರ್ಯಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಜೆಡಿಎಸ್ ಪಕ್ಷ ಸದಾಕಾಲವೂ ರೈತರ ಶ್ರಮಿಕರ ಬಡವರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ ಮೊಳಕಾಲ್ಮೂರು ಕ್ಷೇತ್ರಗಳ ಕ್ಷೇತ್ರದಲ್ಲಿ ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೆಚ್ ಡಿ ಕುಮಾರಸ್ವಾಮಿ ಮಾಡಿರೋ ಸಾಧನೆಗಳನ್ನು ಮನೆಮನೆಗಳಗೆ ತಿಳಿಸುವಂತಹ ಕೆಲಸ ಮಾಡುತ್ತೇನೆ ಮೊಳಕಾಲ್ಮೂರು ಕ್ಷೇತ್ರವನ್ನು ಜೆಡಿಎಸ್ ಪಕ್ಷವನ್ನು ಬಲಪಡಿಸುತ್ತೇನೆ ಈ ಕ್ಷೇತ್ರದ ಜನರು ಜೆಡಿಎಸ್ ಪಕ್ಷಕ್ಕೆ ಒಲವು ತೋರುತ್ತಿದ್ದಾರೆ
ಈ ಸಂದರ್ಭದಲ್ಲಿ ಉಪಸ್ಥಿತರಾದ ಮೊಳಕಾಲ್ಮೂರು ಕ್ಷೇತ್ರದ ತಾಲೂಕು ಅಧ್ಯಕ್ಷ ಕರಿಬಸಪ್ಪ ಅಬ್ಬೆನಹಳ್ಳಿ ಚನ್ನಬಸಪ್ಪ ಎಂ ಎಂ .ಆರ್ ಮಹಾಂತೇಶ್ ತೊರೆಕೋಲಮ್ಮನಹಳ್ಳಿ ಮಾರೇಶ್, ಚನ್ನಕೇಶವ ಕಂಟಿ ಕುಮಾರ್ ಯಾದವ್ , ಬೋರಯ್ಯ, ತಿಪ್ಪೇಸ್ವಾಮಿ, ರುದ್ರಮನಹಳ್ಳಿ ಬೋರಯ್ಯ , ಡಿಸ್ಕೋ ಬಸಣ್ಣ , ಸಳ್ಳೆಗೌಡ , ಅಬ್ಬೇನಹಳ್ಳಿ ಅಜಯ್, ಪರಪ್ಪ ಉಪ್ಪಾರ್ ಜೆಡಿಎಸ್ ವಕ್ತಾರು ಕೊಟ್ರೇಶಿ ಮಂಜುನಾಥ್ ವಕೀಲ ಹನುಮಂತ ರಾಯಪ್ಪ ತಳಕು ಹೋಬಳಿ ಅಧ್ಯಕ್ಷ ಓಬಣ್ಣ ನವೀನ ಪ್ರಕಾಶಹಾಗೂ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಮಹಿಳೆಯರಿಗೆ ಸೀರೆ ವಿತರಣೆ ಮಾಡಿದರು.